Sep 152017
 

दिनाङ्क- १८-१-२०१५
आयोजका: भारतीयविद्याभवनम्
स्थलः- भारतीयविद्याभवनम् बॆङ्गळूरु
अप्रस्तुतप्रसङ्गः- पृच्छकः श्री सुधीर कृष्णस्वामी
सङ्ख्याबन्धः – पृच्छिकाडा|| शान्ताशैवलिनी
निषेधः-पृच्छकःश्री कॆ ऎस् कण्णन्-
वस्तु-इस्लां आत्मावलोकनम्, अनुष्टुप् छन्दः (आवरणे विद्यमानानि अक्षराणि पृच्छकेन निषिद्धानि | तुरीये पादे विना निषेधेन पद्यं पूरितम्|)

(च)नि(य)र्म(म)हा(ज)म(ह)द(व)गी(भ)स्त(व)र्का
(च)न(य)र्म(द)हा(न)स(द)कृ(द)ता(ध)घ(ह)काः
(न)शा(त)म्य(न)ता(स)ढ्या(र)अ(थ)मी(भ)कौ(-)स्यु
रम्लेच्छा मधुराशयाः||

निर्महा मदगीस्तर्का नर्महासकृताघकाः |
शाम्यताढ्या अमी कौ स्युरम्लेच्छामधुराशयाः||

समस्यापूरणम्-पृच्छकः श्री वासुकि ऎच् ऎ
समस्या- मुहुर्मुहुश्चुम्बति देवरं सती |
वंशस्थवृत्तम्||
यथाप्रतिज्ञा द्रुपदेन्द्रकन्यया
कृतापुरा तामनुसृत्यसंप्रति |
विहायधर्मं न च धर्मवर्जिता
मुहुर्मुहुश्चुम्बति देवरं सती ||

दत्तपदी- पृच्छकः श्री नरेश कीर्तिः
वस्तु- शिवस्य नृत्यः, पदनि- मॆणसु, हिङ्गु, जीरा, मसाल
आर्या-
अभिरामेणसुपादन्यासेनकदर्थितोत्तमाहिं गुणिनम्|
चर्याराजीराजितवपुषं नटकामसालनीडे गिरिशम्||

अक्षरमुष्टिका कथनम्-पृच्छकः गणेश भट्ट कॊप्पलतोट
वस्तु- हिमालयः
स्वराः-
अअऎआइआअअ इआऒअअइअअः |
अअअएअईऊआ इउआइअअअआः||
पूरणम्|
कलये शान्तिसारस्यशिवालोकच्छविर्यतः|
भरतक्षेत्रभीत्यूष्माविबुधालिलसद्यशाः ||

आशुकवित्वम्-पृच्छकः श्री राघवेन्द्र जि ऎस्
१. कृष्णावतारस्य ध्येयः
वसन्ततिलक-
उद्धर्तुमद्यरजनीचरचक्रमेतत्
चक्रं करे लसतु कर्कशवह्निधारम्|
दुष्टात्मनां सपदि दुर्भरदर्पशृङ्ग
भङ्गायशार्ङ्गमपि मे भजतात् करोन्यः||

२.जम्बीरफलम्
पानीययोग्यं जलदोदयात् प्राक्
द्वारि प्रसूनैः सममेव बन्धः|
सकुङ्कुमं पादयुगे शिवायाः
जम्बीर! हन्तान्यसमाश्रयस्ते ||

३.(ನೀರೊಲೆ)
ज्वालाजालजटालनैकविलसल्लीलाकुकूलोच्चय(काष्टोच्चयं भावये)
प्रातस्त्वामयि सूर्यरश्मिनिकरप्रोतं जगन्मण्डलम् |
अङ्गारागमलं बिभर्षि भवता तर्तेन कोष्णाम्भसा
स्नानोहं ध्रुवमङ्गरागमधुना कुर्वे पयोयन्त्रकः||

४.चारणम्
इतश्चरचलौकसां दशनतो नवास्रस्रुति-
स्ततो भवति केसरीन्द्रपदपङ्क्तिरत्युज्वला |
अहो गिरिशिखाद्रुमागगनचुम्बिनो दृश्यतां
वितन्वत इमे वनभ्रमणसाहसी स्यां मुहुः ||

Sep 082017
 

ದಿನಾಂಕ೨೭೦೮೨೦೧೭
ಆಯೋಜನೆ
ಪದ್ಯಪಾನ
ಸ್ಥಳ
ಅಭಿನವ, ಬಸವನಗುಡಿ ಬೆಂಗಳೂರು

ಪೀಠಿಕಾಪದ್ಯಗಳು

अभिनवशुभरङ्गे नित्यनृत्यप्रसङ्गे
निरुपमरसयोगे राजदानन्दयागे
|
उपसरतु मुदारं वाणिनीवात्मवाणी
विधुकरमधुपूरं व्यञ्जयन्ती जयन्ती
||

ಇಷ್ಟತಮವಯಸ್ಯವರೋ
ತ್ಕೃಷ್ಟಮನೀಷಾವಿತಾನವೇಲ್ಲನ್ಮಲ್ಲೀ
ಸೃಷ್ಟಿಗೆ ಸರಿಯೆನೆ ಮಾಮಕ-
ಮಷ್ಟವಧಾನಂ ಸರಸ್ವತೀ ಸಾರವತೀ
||

ಚಾರುಚಂದ್ರಚರಣಾನುರಾಗದಿಂ
ಕೈರವಂ ಮಲರ್ವವೊಲ್ ವಿಭಾವರೀ
ದ್ವಾರದೊಳ್ ವಿಲಸದರ್ಜುನರ್ಮವಾಕ್
ಸ್ಫಾರದಿಂದೆ ಸಭೆ ಸಲ್ಗೆ ಮಾಮಕಂ
||

ಅವಧಾನಾಂಗಗಳುಪದ್ಯಗಳು

*ಅಪ್ರಸ್ತುತ ಪ್ರಸಂಗಪೃಚ್ಛಕರುಶ್ರೀ ಶಶಿಕಿರಣ ಬಿ ಎನ್

*ಕಾವ್ಯವಾಚನಪೃಚ್ಛಕರುಶ್ರೀ ಕಶ್ಯಪ ನ ನಾಯಕ

*ನಾಟಕವಾಚನಪೃಚ್ಛಕರು ಶ್ರೀ ಸೋಮಶೇಖರ ಶರ್ಮ
(ನಾಟಕವಾಚನದಲ್ಲಿ ಪೃಚ್ಛಕರು ಓದಿದ ನಾಟಕವನ್ನು ಗುರುತಿಸುವುದರ ಜೊತೆಗೆ ಅವಧಾನಿಗಳು ಆಶುವಾಗಿ ನಾಟಕದ ಗದ್ಯಪದ್ಯಗಳನ್ನು ಗದ್ಯಪದ್ಯಾತ್ಮಕವಾಗಿಯೇ ಅನುವಾದ ಮಾಡಿ ಹೇಳುತ್ತಿದ್ದರು)

*ನಿಷೇಧಾಕ್ಷರಿಪೃಚ್ಛಕರುಗಣೇಶ ಭಟ್ಟ ಕೊಪ್ಪಲತೋಟ
ವಸ್ತು
ಸಮುದ್ರ (ಆವರಣದಲ್ಲಿ ಕೊಟ್ಟ ಅಕ್ಷರಗಳು ಪೃಚ್ಛಕರಿಂದ ನಿಷೇಧಿಸಲ್ಪಟ್ಟವು)
ಕಂ
||
()ಧಾ ()ಟೀ(-)()ನೆ (-)ಪಾ()ಟಿ()()ಲೇಂ
()ಘಾಟಿ ()ಮು ()()ಕ್ಕಾ()()()ತ್ರ()ದಾ(-)ಜ್ಯಾ()ಭಂ (-)ಹೃ
()ಚ್ಚಾಟು()()ಳೇ(-)ನೌ(-)ರ್ವ()ತೆ()ಗೆ
ಸ್ಫೋಟಕಮಿಂತಾದುದಲ್ತೆ ಸಾಗರ ನಿನ್ನೊಳ್

ಧಾಟೀಕನೆ ಪಾಟಿಸಲೇಂ
ಘಾಟಿಮುಖಕ್ಕಾಹ ಸತ್ರದಾಜ್ಯಾಭಂ ಹೃ-
ಚ್ಚಾಟುಗಳೇನೌರ್ವತೆಗೆ
ಸ್ಫೋಟಕಮಿಂತಾದುದಲ್ತೆ ಸಾಗರ! ನಿನ್ನೊಳ್
||

*ಸಮಸ್ಯಾಪೂರಣಪೃಚ್ಛಕರುಶ್ರೀ ಕೆ.ಬಿ.ಎಸ್ ರಾಮಚಂದ್ರ
ಸಮಸ್ಯೆ
ಸೆರೆವಾಳೇ ಸೊಗಮಾದುದೆಂದು ನುಡಿದಳ್ ಸ್ವಾತಂತ್ರ್ಯಮೆಯ್ದಾಗಳೇ
.ವಿ||
ಸರಸೋದಾರಸುಧಾಕರಸ್ಫುರದುರುಸ್ಫಾರಾಸ್ಪದಂ ಸಂದಿರಲ್
ಪರಿಪೂರ್ಣತ್ವವಿಲೋಕನಾರ್ಹಕವನಂ ಮೇಣ್ ಸಾವನಂ ಭಾವಿಸಲ್
ದೊರೆತಾಗಳ್ ಮತಿಗೆಟ್ಟು ಬೇರ್ಪಡುತೆ ನಾಂ ನೊಂದೆಂ ಧವಂ ನೀಳ್ದ ತೋಳ್

ಸೆರೆವಾಳೇ ಸೊಗಮಾದುದೆಂದು ನುಡಿದಳ್ ಸ್ವಾತಂತ್ರ್ಯಮೆಯ್ದಾಗಳೇ||

*ದತ್ತಪದಿಪೃಚ್ಛಕರುಶ್ರೀ ಶ್ರೀಶಕಾರಂತ
ವಸ್ತು
ನೃತ್ಯಪದಗಳುರಾಗ, ತಾನ, ಪಲ್ಲವಿ, ತನಿ
||
ರಾಗರಸಕ್ರಿಯಾಪ್ರವಹಣಕ್ಕುರುವಾಜಿಯೆನಲ್ಕೆ ನೂಪುರಂ
ಮಾಗಿಸಿ ಚಿತ್ತಮಂ ಮಲರ್ದಿರಲ್ಕೆ ವಿತಾನಲತಾಂತಸನ್ನಿಭಂ
ಬಾಗುತೆ ಬಳ್ಕುತುಂ ತನುಲತಾನಟಿ ಪಲ್ಲವಿಸಲ್ಕೆ ತೋರದೇಂ
ಪೂಗಳವೊಲ್ ಸಮಸ್ತಕರಣಾರ್ಥಕಮೀಪರಿ ಮಾತನೀವುದೇಂ
||

*ಉದ್ದಿಷ್ಟಾಕ್ಷರಿಪೃಚ್ಛಕರು ಶ್ರೀ ರಾಘವೇಂದ್ರ ಜಿ ಎಸ್
ವಸ್ತು
ದಂತಪಂಕ್ತಿ
ಅನುಷ್ಟುಪ್

मुक्ताहारतयानूनं दाडिमीबीजराजिवत् |
कालकीरेण हन्ता सा शुक्तिरूपा तु लुप्तिला ||

*ಆಶುಕವಿತೆಪೃಚ್ಛಕರುಶ್ರೀ ಅರ್ಜುನ ಭಾರದ್ವಾಜ
. ರತಿವಿಲಾಪ (रतिविलापम्)
जगदस्तु कथं विचिन्त्यतामभिलाषः किल भस्मतां गतः |
अनुभोगविदा न दक्षता रतिरेका त्ववशिष्यते कथम् ||

ಕತ್ತರಿ
ಅಖಂಡಮಂ ಖಂಡಿಸೆ ತಾಂಡವಿಪ್ಪೀ
ಮುಖಾಕ್ಷಿಪದ್ಯುಗ್ಮತೆಯೇತಕೋ ಮೇಣ್
ಸುಖಂಗಳಂ ಪೊಂದಿಯುಮಿಂತು ಸಖ್ಯದೊಳ್
ಮಖದ್ವಿಷರ್ಕಳ್ಗೆ ಸಮಾನಮಪ್ಪುದೇಂ
||

. ಕಂಪ್ಯೂಟರ್ ಮೌಸ್ (computer mouse)
गणकयन्त्रगतोन्दुरुजीवनं
गणपतेरथपत्रवदीहितम्
|
विगततां तव सन्ततिरञ्जसा
विभुमहो नयतीह यथारुचि
||

. ನಟರಾಜ (नटराजः)
अञ्चितं कुञ्चितं पादं पर्यायेण पुनःपुनः|
तन्वन्नाभाति शर्वोऽसौ नर्तने खलमर्दने
||

Mar 292017
 

ದಿನಾಂಕ- ೦೮-೦೧-೨೦೧೭.
ಆಯೋಜನೆ- ಟೂಲ್ ರೂಮ್ಸ್ ಬೆಂಗಳೂರು
ಸ್ಥಳ- ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಬೆಂಗಳೂರು.

ಅವಧಾನಾಂಗಗಳು- ಪದ್ಯಗಳು-

*ಅಪ್ರಸ್ತುತಪ್ರಸಂಗ- ಪೃಚ್ಛಕರು ಶ್ರೀ ಸಂದೀಪ ಬಾಲಕೃಷ್ಣ
*ಕಾವ್ಯವಾಚನ-
ಪೃಚ್ಛಕರು- ಶ್ರೀ ಉಲ್ಲಾಸ ಹಾರೀತಸ
*ನಾಟಕವಾಚನ-
ಪೃಚ್ಛಕರು– ಶ್ರೀ ಶಶಿಕಿರಣ ಬಿ ಎನ್
(ನಾಟಕವಾಚನದಲ್ಲಿ ಪೃಚ್ಛಕರು ಸಂಸ್ಕೃತನಾಟಕವೊಂದರ ಭಾಗವನ್ನು ಆರಿಸಿ ಓದಿದಾಗ ಅವಧಾನಿಗಳು ಅದನ್ನು ಗುರುತಿಸಿ ಹೇಳುವುದರ ಜೊತೆಗೆ ಅದನ್ನು ನಾಟಕೀಯವಾಗಿ ಅಲ್ಲಿಯೇ ಗದ್ಯಪದ್ಯಗಳಲ್ಲಿ ಆಶುವಾಗಿ ಅನುವಾದಿಸಿ ಓದುತ್ತಿದ್ದರು)

*ನಿಷೇಧಾಕ್ಷರಿ-
ಪೃಚ್ಛಕರು– ಶ್ರೀ ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ
ವಸ್ತು- ವೃದ್ಧಾಶ್ರಮ, ಛಂದಸ್ಸು-ಚೌಪದಿ, (ಆವರಣದಲ್ಲಿ ಕೊಟ್ಟ ಅಕ್ಷರಗಳು ಪೃಚ್ಛಕರಿಂದ ನಿಷೇಧಿಸಲ್ಪಟ್ಟವು-ಕೊನೆಯ ಪಾದದಲ್ಲಿ ನಿಷೇಧಿಸಲಿಲ್ಲ)
(ದೀರ್ಘಾಕ್ಷರ) ಸ (ಗ) ಞ್ಜೆ (-)ಗ (ನ)ಬ್ಬ(ದ)ಕೆ(ದ)ಸ(ರ)ನ್ದ(ಮ)ಸ(ಶ)ರ್ಗಾ(ತ)ವ(ಧ)ಗಾ(ಹ)ನ(ಕ)ಮೇಂ
(ನ)ಬಿಂಜ(ಕ)ಮೇ(ದ)ನೈ(ರ) ಮ(ಜ)ರ್ತೆ(ಗ)ಸೂ(ಕ)ರ(ಪ)ನೇ(-)ಳ್ವಂ
(ಮ)ಕಂಜ(ಮ)ಹಾ(ಸ)ವ(ಕ)ಮೆ(ಸ)ನ(ರ)ಲ್ಮೆ(ಬ)ಸ(ರ)ಯ್ಪು(ನ)ವ(ಕ)ಡ್ಡ(ರ)ವ(ಗ)ನೆ(ಕ)ತಾಂ
ನಂಜುನುಡಿಯೇಕೆ ಮುದುಪರ್ಗೆ ಮಕ್ಕಳ್ಗೆ|

ಸಂಜೆಗಬ್ಬಕೆ ಸಂದ ಸರ್ಗಾವಗಾನಮೇಂ
ಬಿಂಜಮೇನೈ ಮರ್ತೆ ಸೂರನೇಳ್ವಂ
ಕಂಜಹಾವಮೆ ನಲ್ಮೆ ಸಯ್ಪು ವಡ್ಡವನೆ ತಾಂ
ನಂಜುನುಡಿಯೇಕೆ ಮುದುಪರ್ಗೆ ಮಕ್ಕಳ್ಗೆ||

*ಸಮಸ್ಯಾಪೂರಣ-
ಪೃಚ್ಛಕರು– ಶ್ರೀ ಗಣೇಶ ಭಟ್ಟ ಕೊಪ್ಪಲತೋಟ
ಸಮಸ್ಯೆ- ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ
ಮತ್ತೇಭವಿಕ್ರೀಡಿತ||
ಚತುರಾ! ಪೃಚ್ಛಕವರ್ಯ! ಪೇಳ್ವುದಿದಕೇಂ ಬಾನತ್ತಲೀಕ್ಷಿಪ್ಪೆಯೇಂ
ಸ್ತುತವಾರಾಂನಿಧಿ ನೀರಮಲ್ತೆ ಮುಗಿಲೇ ತತ್ಪುತ್ರನೆಂದೊಪ್ಪಿರಲ್
ಸತಿವಿದ್ಯುನ್ನಟಿ ಮಿಂಚಿರಲ್ ಮಲೆತಿರಲ್ ವರ್ಷಾಗಮಂ ಭಾಗ್ಯಮೇ
ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ ||

*ದತ್ತಪದಿ-
ಪೃಚ್ಛಕರು– ಶ್ರೀ ಶ್ರೀಧರ ಸಾಲಿಗ್ರಾಮ
ವಸ್ತು- ಕಳ್ಳ ಸಂನ್ಯಾಸಿ ದತ್ತಪದಗಳು- ರಂ, ಜಿನ್, ವೈನ್, ಬೀರ್
ರಥೋದ್ಧತಾ||
ರಾಗರಂಜಿತಭರಂ ಜಿತಸ್ಮರಾ
ವೇಗವಂಚಿತನಜಿನ್ಮನೋಮಥಂ
ಭಾಗಿಯಾಗಿರೆ ನವೈನಸಕ್ಕನು-
ದ್ವೇಗಮೆಲ್ಲಿ ರತಿ ಬೀರಿರಲ್ ರಸಂ||

*ಉದ್ದಿಷ್ಟಾಕ್ಷರಿ-
ಪೃಚ್ಛಕರು– ಶ್ರೀಮತಿ ಕಾಂಚನಾ
ವಸ್ತು-ಮಕರಂದ. (ಇದು ಉದ್ದಿಷ್ಟಾಕ್ಷರಿಗೆ ರಚಿಸಿದ್ದಾದರೂ ಅವಧಾನಿಗಳು ಗೋಮೂತ್ರಿಕಬಂಧವನ್ನೂ ಮಾಡಿದ್ದಾರೆ. ಮೊದಲ ಪಾದ ಹಾಗೂ ಎರಡನೇ ಪಾದಗಳು, ಮೂರನೇ ಪಾದ ಹಾಗೂ ನಾಲ್ಕನೇ ಪಾದಗಳು ಪರಸ್ಪರ ಗೋಮೂತ್ರಿಕಬಂಧದಲ್ಲಿ ಅಡಕವಾಗಿವೆ)
ಸುಮನೋಜನಸಂಸಾರಂ
ಕಮಲಾಜಯಸಂಗರಂ |
ಭ್ರಮರೀಯರಸಾಸಾರಂ
ಕಮನೀಯಲಸಾಕರಂ ||

*ಆಶುಕವಿತೆ-
ಪೃಚ್ಛಕರು– ಶ್ರೀ ಸೋಮಶೇಖರ ಶರ್ಮ
೧.ವಸ್ತು- ಹರಳೆಣ್ಣೆಯ ಸ್ನಾನ
ಇಂದ್ರವಂಶಾ||
ಏರಂಡತೈಲೋರ್ಜಿತಮಜ್ಜನಂ ವಲಂ
ಶ್ರೀರಂಗಧಾಮಂಗೆ ಹಿತಾವಹಂ ಸದಾ
ಸಾರೈ ಕುವೆಂಪೂದಿತಗದ್ಯಬಂಧದೊಳ್
ಪಾರಮ್ಯಮಂ ವರ್ಣಿಪುದೆಂತು ಕಬ್ಬದೊಳ್||

೨.ತಂಬೂರಿಯ ಜೀವ(ಕುದುರೆ ಮತ್ತು ತಂತಿಯ ನಡುವೆ ಇರುವ ನೂಲು)
ಕಂ||
ತುಂಬಿದ ತುಂಬೀಫಲಮುಂ
ಲಂಬೋಜ್ವಲಮಸ್ಕರಮುಮೆ ತಾಮಿರ್ಕೆ ಸದಾ
ಇಂಬಾಗದು ಗುಣಮಿರದಿರೆ
ಸಂಬರಮೇ ಸರಿಗಪದನಿ ನಾದಕೆ ನುಡಿಯೊಳ್ ||

೩.ಹೆಂಗಸರ ಹರಟೆ
೧. ನಂದಕವೃತ್ತ||
ಊರ್ಣನಾಭನೇ ಪೂರ್ಣಮಾಗಿಯೀ
ಕರ್ಣಧಾರತಾಭ್ಯರ್ಣವಂ ಗಡಾ||
೨. ದ್ರುತವಿಲಂಬಿತ||
ದ್ರುತವಿಲಂಬನಮಲ್ತೆ ವಿಭಾವಿಸಲ್
ಹಿತಕರಂ ಕಥೆ ಜಲ್ಪನಮೇಗಳುಂ
ಸತಿಯರಾ ಪರಮಾರ್ಥದೆ ಕೌನ್ಸಿಲಿಂಗ್
ಕ್ಷತಿಯದಿಲ್ಲದೆ ಕಾಂತರುಮಿರ್ಪರೈ||

(ಪ್ರೇಕ್ಷಕರೊಬ್ಬರು ಗಂಡಸರ ಬೊಗಳೆಯ ಬಗ್ಗೆಯೂ ಪದ್ಯ ಹೇಳಬೇಕೆಂದು ಕೇಳಿದಾಗ ಹೇಳಿದ ಪದ್ಯ)
ಬೊಗಳೆಯೊಂದಿರೆ ಬಾರಿಗೆ ಸಾಗರೈ
ಬೊಗಳೆಯೊಂದಿರೆ ಬೀಡಿಗೆ ಮಾಗರೈ
ಬೊಗಳೆಯೊಂದಿರೆ ಮಾನಿನಿಗಾಗರೈ
ಬೊಗಳೆಯೇ ನಿಗಳಂ ಗಡ ಗೇಹಕಂ||

೪. ಮಗಳನ್ನು ಧಾರೆಯೆರೆಯುತ್ತಿರುವ ತಾಯಿ
ಸಾಂಗತ್ಯಮಾಲಿಕೆ-
ಜಾತಕ ಹೊಂದಿಸಿ ಛತ್ರವ ಹುಡುಕುತ
ಸೋತೆನೆಲ್ಲವ ನಾನು ಗೆಯ್ದು
ಈತನೊ ಧಾರೆಯ ಹೊತ್ತಿಗಾದರು ಬರ್ಕೆ
ಮಾತಂತೆ ನಿಲ್ಲಲೆಂದೆನುವಂ||
ಮಗಳನ್ನು ಕೊಡುವಾಗ ಕೈಗಳ ಜೋಡಿಸಿ-
ಯಗಲವು ಸಮ್ಮುದವಲ್ತೇ
ನಗದಂತೆ ಬೀಗರು ಸುತೆಯ ಕಂಬನಿಯನ್ನು
ಮಿಗದಂತೆ ಮಾಡಲಿ ಪತಿಯು||
ಪುಸ್ತಕಕೀಲಿತಮತಿಯು ಮಹತ್ತರ
ಶಸ್ತಶ್ರೀ ಕೃಷ್ಣಮೂರ್ತಿಗಳು
ಸುಸ್ತಾಗದಂತೆ ಸರೋಜಮ್ಮನವರಲ್ಲಿ
ವಿಸ್ತರಿಸಿದ ಪರಿಯಿದುವೆ||

 

Mar 212017
 

ದಿನಾಂಕ- ೧೬-೦೨-೨೦೧೪ ಭಾನುವಾರ.
ಆಯೋಜನೆ- ಪದ್ಯಪಾನ
ಸ್ಥಳ- ಮಂಗಳಮಂಟಪ ಎನ್ ಎಂ ಕೆ ಆರ್ ವಿ ಕಾಲೇಜು, ಜಯನಗರ ಬೆಂಗಳೂರು.

*ಆರಂಭದಲ್ಲಿ ಅವಧಾನಿಗಳು ಅವರ ತಾಯಿಯನ್ನು ನೆನೆಸಿಕೊಂಡು ಆಶುವಾಗಿ ಹೇಳಿದ  ಪದ್ಯಗಳು-

ಕಲೆಯಂ ಕಲಿಪುದೆ! ಜೀವನ-
ಕಲೆಯನೆ ನೀಂ ಕಲಿಸಿದಾಕೆ ನಡೆಯಿಂ ನುಡಿಯಿಂ
ಕಲೆ ಮಾಯ್ವುದೆ ಮನ್ಮನದೊಳ್
ಕಲೆಯಲ್ಕನುದಿನದನಂತಸಂಸ್ಮೃತಿ ನಿನ್ನಾ ||

ಧಾರೆಯನೆರೆದೌ ಜೀವನ-
ಧಾರೆಯನೇ ಕ್ಷೀರಧಾರೆಯಿಂ ಮೊದಲಾಗಳ್
ಧಾರಣಮಿತ್ತೌ ಜೀವನ
ಧಾರಣಮೈ ಧೈರ್ಯಧನ್ಯೆ ತಾಯೆ ಅನನ್ಯೇ||

ಇಂದಿನವರೆಗಂ ಪದ್ಯಮ-
ನೊಂದನುಮಂ ನುಡಿಯಲಿಲ್ಲ ನಿನ್ನಯ ಮೇಲಾಂ
ನೊಂದಪೆಯೇಂ ತಾಯೇ ಆ-
ನಂದಾತ್ಮಮನೆಂತು ನುಡಿವುದದ್ವೈತಿ ಗಡಾಂ||

ಮೃಗಮೇಂ ನಗಮೇಂ ನೀಂ ಬರಿ
ಜಗಮೇಂ ಬಡ ದೇವರೇಂ ಕವಿತೆಗೆಟುಕಲ್ ಪೋ
ಬಗೆಯೇ ಬಿಚ್ಚಳಿಸುವ ಸೊಗ-
ದೊಗೆಯೇ ಸೋಲ್ತಸಿದು ಸುಯ್ವ ಸತ್ತ್ವಮಲಾ ತಾಯ್ ||

मातर्मदीयकवितावनितावसन्त-
स्फारॆ वसन्ततिलकोज्वलवृत्तसारॆ।
मत्कावधानकसहस्रकमश्रुजातं
त्वत्कावधानविभवार्चनवारिजातम् ॥

*ಸರಸ್ವತಿಯ ಸ್ತುತಿ, ಅವಧಾನಕಲೆಯ ಪ್ರಶಂಸೆ, ಆಯೋಜಕರಿಗೆ ಅಭಿವಂದನೆಯನ್ನು ಹೇಳುವ ಪದ್ಯಗಳು-

ಅಕ್ಷಯ್ಯಾರ್ದ್ರತೆ ಮೀರಲೆನ್ನ ರಸನಾಸ್ಥಾಲ್ಯಂತದೊಳ್ ಚೆಲ್ಲಿದೀ
ಭಿಕ್ಷಾತಂಡುಲಮುಷ್ಟಿಯಲ್ತೆ ಜನನೀ ನಾಲ್ಕಕ್ಕರಂ ನಿನ್ನದೀ
ಪ್ರೇಕ್ಷಾಸಾಕ್ಷಿಣಿ ಮೇಣಿದರ್ಕೆನಿತೊ ಲೋಕಪ್ರೀತಿ ವಿಖ್ಯಾತಿಯೋ
ದಾಕ್ಷಿಣ್ಯರ್ಥಿಯದೆಂತು ವಂದಿಪುದೊ ಪೇಳ್ ನಿತ್ಯಾಧಮರ್ಣಂ ಗಡಾಂ ||

ಅವಧಾನದ್ರುಮದಾಲವಾಲವಲಯಂ ಸಭ್ಯಾಂತರಾಲಂ ರಸ-
ಪ್ರವಣಂ ಸಲ್ವುದು ಕಂಟಕಾವರಣಮೀ ಪ್ರಷ್ಟೃಪ್ರಪಂಚಂ ಗೆಲಲ್
ಶಿವಸಂಸ್ಫೂರ್ತಿಕರಂ ಕವಿತ್ವಸುಮನೋರಕ್ಷಾವ್ರತಿಷ್ಠಂ ಸಲಲ್
ತವೆ ನೈರ್ಭರ್ಯದಿನೋತು ಪಾಡುವೆನಿದೋ ನಾಂ ಪಕ್ಕಿವೊಲ್ ಸರ್ವಥಾ ||

ಪದ್ಯಪಾನದವಯಸ್ಯವೃಂದಕಿಂ-
ದುದ್ಯತಾಂಸನಭಿವಂದಿಪೆಂ ಹೃದಾ-
ವೇದ್ಯಗೌರವಮನೆಂತು ಪೇಳ್ವುದೋ
ಪದ್ಯದೊಳ್ ಲಘುವಿನೋಘಮುಂ ಪುಗಲ್ ||

ಅವಧಾನಾಂಗಗಳು- ಪದ್ಯಗಳು-

*ಅಪ್ರಸ್ತುತಪ್ರಸಂಗ- ಪೃಚ್ಛಕರು ಶ್ರೀ ಸೂರ್ಯಪ್ರಕಾಶ ಪಂಡಿತ್
*ಸಂಖ್ಯಾಬಂಧ-
ಪೃಚ್ಛಕರು– ಶ್ರೀ ಸುಧಾಕರ್ ಜೋಯಿಸ್
*ಘಂಟಾವಾದನ-
ಪೃಚ್ಛಕರು– ಶ್ರೀ ಗೌತಮ ರಾಮಮೂರ್ತಿ
*ಕಾವ್ಯವಾಚನ-
ಪೃಚ್ಛಕರು- ಶ್ರೀ ಚಂದ್ರಶೇಖರ ಕೆದಿಲಾಯ (ಕನ್ನಡ), ವಿ|ರಂಜನಿ ವಾಸುಕಿ (ಸಂಸ್ಕೃತ)

*ನಿಷೇಧಾಕ್ಷರಿ-
ಪೃಚ್ಛಕರು– ಡಾ||ಎಸ್ ರಂಗನಾಥ.
ವಸ್ತು- ಸೂರ್ಯಸ್ತುತಿ, ವೃತ್ತ- ರಥೋದ್ಧತಾ, (ಆವರಣದಲ್ಲಿ ಕೊಟ್ಟ ಅಕ್ಷರಗಳು ಪೃಚ್ಛಕರಿಂದ ನಿಷೇಧಿಸಲ್ಪಟ್ಟವು-ಕೊನೆಯ ಪಾದದಲ್ಲಿ ನಿಷೇಧಿಸಲಿಲ್ಲ)
(ಸ)ಶ್ರೀ(ರ)ಮ(ಕ)ಹ(ರ)ಸ್ವಿ (ದ)ನಿ (ತ) ನ(ನ)ತಿ(ವ)ರ್ಮ(ವ)ಮಾ(ರ)ಸ್ತು(–)ಚಿ-
(ತ)ದ್ಧಾ(ರ)ಮ್ನಿ (ಕ)ಸ(ರ)ಪ್ತ(ಸ)ಕ(ರ)ಮ(ನ)ಹಿ(ಮ)ಷ್ಠ (ತ) ಭೂ(ಮ)ತಿ(ನ)ಷು
(ಮ)ಸಾ(ರ)ಮ್ನಿ (ವ)ಚಾ(ರ)ನಿ(ಕ)ಲಿ(ಪ)ಗು(ಪ)ರೌ(ವ) ಜ(ರ)ಲೇ(ಕ)ಜಿ(ತ)ನಿ
ಪ್ರೇಮ್ನಿ ಕೋಟಿಶತಕೋಟಿಧಾಮನಿ ||

श्रीमहस्विनि नतिर्ममास्तु चिद्धाम्नि सप्तकमहिष्ठभूतिषु|
साम्निचानिलिगुरौजलेजिनि प्रेम्नि कोटिशतकोटिधामनि ||

*ಸಮಸ್ಯಾಪೂರಣ
ಪೃಚ್ಛಕರು- ಶ್ರೀ ಶಂಕರನಾರಾಯಣ ಉಪಾಧ್ಯಾಯ
ಸಮಸ್ಯೆ- ಅಂಡರ್ವೇರಿನ ಗಣೇಶಗಾರತಿಗೈದರ್||
ಕಂದಪದ್ಯ||
ಪಾಂಡಿತ್ಯದ ಪೇಶಲತೆಯ
ಚಂಡೇತರ ಭಾವಮಿರ್ಪ ವಾಗುದ್ದಂಡರ್
ಕಂಡರ್ ಪೂಜಿಪ ಕವಿಮಾ-
ರ್ತಂಡರ್ ವೇರಿನ ಗಣೇಶಗಾರತಿಗೈದರ್

*ದತ್ತಪದಿ-
ಪೃಚ್ಛಕರು- ಶ್ರೀ ಬಿ ಆರ್ ಪ್ರಭಾಕರ್
ವಸ್ತು-ಅವಧಾನಕಲೆಯ ಪ್ರಶಂಸೆ, ದತ್ತಪದಗಳು- ಸಾವಿರ, ಹಜಾರ್, ಸಹಸ್ರ, ಸಾಸಿರ,
ವಸಂತತಿಲಕ||
ನಿರ್ಮಾಣಮಲ್ತೆ ನುಡಿ ಸಾವಿರದಂತೆ ಸಾಗಲ್
ನಿರ್ಮೋಹಜಾರಿಣಿಸಮಿದ್ಧಹುತಾಶದೀಪ್ರಂ
ಕರ್ಮೀಣಮೋಕ್ಷದ ವಿರುದ್ಧ ಸಹಸ್ರಧಾರಾ
ಮರ್ಮಜ್ಞಮಾರ್ಗಮರಸಾ! ಸಿರಮೊಗ್ಗಿ ಕೇಳಲ್

*ಚಿತ್ರಕವಿತೆ
ಪೃಚ್ಛಕರು- ಡಾ|| ಶಂಕರ್ ರಾಜಾರಾಮನ್
ವಸ್ತು- ಶಾರದಾಸ್ತುತಿ
೧.ಪುಷ್ಪಗುಚ್ಛಬಂಧ , ಶ್ಲೋಕ||

pushpaguchha

೨.ಕುಂಡಲಿತನಾಗಬಂಧ, ಚಂಪಕಮಾಲೆ||

kundalita1000

೩.कवि-बन्ध-नामगर्भीकृतमहापद्मबन्ध- स्रग्धरा||padmabandha

*ನೃತ್ಯಕ್ಕೆ ಕಾವ್ಯ-
ಪೃಚ್ಛಕರು- ಶ್ರೀಮತಿ ನಿರುಪಮಾ ರಾಜೇಂದ್ರ
ವಸ್ತು- ವಿಶ್ವಾಮಿತ್ರ ಮೇನಕೆಯರ ಕಥಾನಕ.
ಹರಿಣಿ||
ಕರಣಹರಿಣಪ್ರಾಣಾಹಾರಂ ನಿಜಾಂಗದನಾದಮಾ-
ಗಿರೆ ಮದನನೇ ಮೇನಾಮಾನಕ್ಕೆ ತೂಗಿರೆ ಕೋಲ್ಗಳಂ
ಧರಣಿಸುರತಾವಾಪ್ತಿಪ್ರೀತಂಗೆ ಪಾಡಿಸಿ ಮಂಗಳಂ
ತೊರೆದು ಶಿಶುವಂ ಪಾವಿಂಗೆತ್ತಾಕೆ ಸಾರ್ವಳದೋ ಸ್ವರಂ||

*ಚಿತ್ರಕ್ಕೆ ಪದ್ಯ-
ಪೃಚ್ಛಕರು- ಶ್ರೀ ರಾಘವೇಂದ್ರ ಹೆಗಡೆ
ವಸ್ತು-(ಚಿತ್ರ ಪ್ರತಿಯೊಂದು ಸುತ್ತಿನಲ್ಲೂ ಬದಲಾಯಿಸಲ್ಪಡುತ್ತಿತ್ತು)
ಮೊದಲ ಸುತ್ತಿನಲ್ಲಿ- ಎಲೆಗಳು ಉದುರಿದ ಮರ
ಎರಡನೇ ಸುತ್ತಿನಲ್ಲಿ-ಹಸಿರು ಎಲೆಗಳಿಂದ ತುಂಬಿದ ಮರ
ಮೂರನೇ ಸುತ್ತಿನಲ್ಲಿ- ಅದು ಮನುಷ್ಯನೊಬ್ಬನ ತಲೆಯಲ್ಲಿರುವಂತೆ ಬದಲಾವಣೆ
ಮಲ್ಲಿಕಾಮಾಲೆ||
ಕಾಲಕಾಂತನಿಗೋಲೆಯಂ ಬರೆಯಲ್ಕೆ ಪತ್ರಮನೆಲ್ಲಮಂ
ಜಾಲಿಸಿರ್ದಮಹೀರುಹಾಂಗನೆಯಿಂದು ಸುಗ್ಗಿಗೆ ತಾನೆನಲ್
ಲೀಲೆ ತಾನಿದು ಚಿತ್ತದೊಳ್ ನೆಲೆಯಾಗೆ ಮಾನವರೆಲ್ಲರಾ
ಕ್ಷ್ವೇಲಸಂಭವದಂತ್ಯದೊಳ್ ಸುಧೆ ಬಂದವೊಲ್ ನೆರೆ ತೋರುಗುಂ||

*ಆಶುಕವಿತೆ-
೧. ಪೃಚ್ಛಕರು-ಶ್ರೀ ಗಣೇಶ ಭಟ್ಟ ಕೊಪ್ಪಲತೋಟ
ವಸ್ತು- ಈಚಲು ಮರದ ಬಗ್ಗೆ ಅನ್ಯೋಕ್ತಿ
ಸಾಂಗತ್ಯ||
ತೆಂಗಿನ ಮರಗಳ ಸಂಗಾತಿ ನೀನಾಗಿ
ಗಂಗೆಯ ನೀಡದೆ ಹೋದೆ|
ಮಂಗಲತಾಲಸರಸ್ವತಿ ದೂರಾಗೆ
ಪೊಂಗುವ ನೀಪವೆ ಜೋಕೆ||

೨. ಪೃಚ್ಛಕರು-ಶ್ರೀ ರಾಘವೇಂದ್ರ ಜಿ.ಎಸ್
ವಸ್ತು-ಮಹಾಕವಿಯ ಉತ್ತಮೋತ್ತಮ ಪದ್ಯವನ್ನು ಓದಿದಾಗ ಆಗುವ ಭಾವ-
ಸೀಸಪದ್ಯ||
ಆನಂದಭಾಷ್ಪಸಂತಾನಮೇ ನೇತ್ರಯುಗದಂಪತೀಹೃದಯಾಂತರಾಳಮೊಗಿಸಲ್
ಕವಿತೆಯೊಳಗೇನೇನದಿರ್ಪುದೋ ನಾಂ ತಿಳಿಯವೇಳ್ಕುಮೆಂದೀ ಧೀರಭಾವಮುರ್ಕಲ್
ಇಂತಪ್ಪ ಪದ್ಯಮಂ ಬರೆಯಲಾನಿಲ್ಲೆಂದು ಖೇದಪ್ರಪಂಚಮೇ ಧೀಂಕಿಡಲ್ಕೆ
ಯಾಕಾಗಿ ಪುಟ್ಟಿದೆಂ ಕವಿಯೀತನೀಕಾವ್ಯಮೇಕಾದುದೋ ಎನಲ್ ಪೊಡೆಯಕಿರ್ಚು
ಅಂತು ಇಂತೊ ಮತ್ತೆಂತೊ ನಾಂ ಕಲಿತೆನಲ್ತೆ
ಭಾಷೆಯಿದನಂತೆ ಸತ್ಕಾವ್ಯರೀತಿನೀತಿ
ಜಾಡದೆನ್ನುತ್ತೆ ನಾಂ ಕೃತಾರ್ಥಾತ್ಮದಿಂದಂ
ಮತ್ತೆ ಸಾಗುವೆಂ ಬೆಂಬತ್ತೆ ಬೆಳಕನೆಂದುಂ||

೩. ಪೃಚ್ಛಕರು-ಶ್ರೀ ಮಹೇಶ ಭಟ್ಟ ಹಾರ್ಯಾಡಿ
ವಸ್ತು- ಚಂದ್ರೋದಯ
आर्या||
वक्रोक्तिरिव वरकवॆर्बालेन्दुकला विभाति गगनतले
सोमचमसरूपायां तस्यां जगदाशु पिबति रसनवकम्॥

೪. ಪೃಚ್ಛಕರು-ಶ್ರೀ ವಾಸುಕಿ ಎಚ್.ಎ
ವಸ್ತು- ಏಕಲವ್ಯನ ಮಹಾಭಾರತಯುದ್ಧವನ್ನು ಕಂಡು ಆಗುವ ಭಾವನೆ
ಚೌಪದಿ||
ವಿಜಯಲಕ್ಷ್ಮಿಯಗಣನೆಗೆಲ್ಲ ವೀರರ್ ಸಂದು
ಸ್ರಜೆಯನೇ ಧರಿಸುತ್ತೆ ದಿವಮಡರ್ದರ್
ನಿಜಗಣನೆಯಾಗದೇಂ ಕುರುಭೂಮಿ ರಣದಲ್ಲಿ
ಭಜಿಸಿದೆಂ ಗಡ ಮೊದಲ್ವೆರಲನಿತ್ತಾಂ ||
ಕಂದ||
ಬರೆದೆಂ ವೆರಲೊಂದರಿನೇ
ಪರಿಪೂರ್ಣಮಹೀಯಮಪ್ಪ ಬೀರರ ಕಬ್ಬಂ
ಬರೆಯಲ್ಕಾರ್ಪನೆ ಸಾಸಿರ
ಮಿರಲುಂ ಕರರಾಜಿ ಭಾನುವವನಾ ಜಸಮಂ||

೫ ಪೃಚ್ಛಕರು-ಶ್ರೀ ಸೋಮಶೇಖರ ಶರ್ಮ
ವಸ್ತು- ನಟಿಯೊರ್ವಳ ಪ್ರಸಾಧನ ಕಲಾವಿದನ ಮೂಕಪ್ರೇಮ
ಭಾಮಿನಿ||
ಕನ್ನಡಿಯ ಕದಪುಗಳ ಮೇಗಡೆ
ಚೆನ್ನೆನಲ್ ಕೆಂಪನ್ನು ಲೇಪಿಪ
ಪನ್ನತಿಕೆ ತಾನಿರ್ದೊಡಂ ಲಜ್ಜೆಯನು ತರಿಸದಿಹೆಂ
ಸೂನ್ನತಾಧರಬಿಂಬಕಂ ಸಂ
ಪನ್ನತೆಯ ತಂದೀವೆನಾದೊಡ-
ಮಿನ್ನುಮದರೊಳ್ ನಿಜದೊಲವನೇ ಉಸಿರದಿಹೆನಲ್ತೇ

೬. ಪೃಚ್ಛಕರು-ಶ್ರೀ ರಾಮಚಂದ್ರ ಕೆ.ಬಿ.ಎಸ್
ವಸ್ತು- ಅರ್ಧನಾರೀಶ್ವರತತ್ತ್ವ
ಮತ್ತೇಭವಿಕ್ರೀಡಿತ||
ಶ್ರುತಿಯೇ ರೂಪಿಸಿಕೊಂಡತತ್ತ್ವಮಮಲಂ ವಾಗ್ವ್ಯಕ್ತಿಲೋಕಾನುಭೂ-
ತ್ಯತಿಮಾತ್ರಂ ಕವಿಕಾಲಿದಾಸಕವನಕ್ಕಾಧಾರಮಾಯ್ತಾದಿಯೊಳ್
ಪತಿಪತ್ನೀಸ್ಥಿತಿ ವರ್ತಮಾನಜಗದೊಳ್ ಸಾಗಲ್ಕಿದಾದರ್ಶಮೆಂ-
ದತಿಮಾತ್ರಂ ನುಡಿಯಲ್ಕೆ ಸಲ್ವುದೆ ಬುಧಾ! ಮಾಡರ್ನ್ ಪೊಯೆಟ್ರೀ ಬರಲ್||

೭. ಪೃಚ್ಛಕರು-ಶ್ರೀ ಸುಧೀರ್ ಕೃಷ್ಣಸ್ವಾಮಿ
ವಸ್ತು- ವಿದೇಶ ಪ್ರವಾಸ
ಸಂತುಲಿತಮಧ್ಯಾವರ್ತಗತಿ||
ಬಾಲ್ಯದಲ್ಲಿ ಭೂಗೋಳದಲ್ಲಿ ಬೆರಳಿಟ್ಟು ಸುತ್ತಮುತ್ತ
ಕಲ್ಯವರ್ತಮಿತಮಾತ್ರನಾಗಿ ನೋಡಿದ್ದೆ ಜಗವನಿತ್ತ
ಮಧ್ಯದಲ್ಲಿ ಅಷ್ಟಿಷ್ಟು ಹಾರಿ ಹೌಹಾರಿ ಕಂಡೆ ಜಗವ
ವೇಧ್ಯಮಾಯ್ತು ಸಂವೇದ್ಯಮೀಗ ಗಣಪತಿಯ ಜಾಣ್ಮೆ ನಗುವ

೮. ಪೃಚ್ಛಕರು-ಶ್ರೀ ರಂಗನಾಥ ಪ್ರಸಾದ
ವಸ್ತು- ಯೌವನ ಕೆಟ್ಟದ್ದು ಎನ್ನುತ್ತಾರೆ. ನೀವೇನು ಹೇಳುವಿರಿ
ಸ್ವಾಗತ||
ಯೌವನಂ ದುರಿತಮೆಂಬುದು ತಥ್ಯಂ
ಪಾವನಂ ಗಡ ಕಲಾಮಯಮಾಗಳ್
ಗೋವು ಪಾಯ್ವುದೆನೆ ಕೊಲ್ಲುವುದೇನೈ
ತೀವಿರೈ ಕರೆದು ದುಗ್ಧಮನೆಲ್ಲರ್||

೯. ಪೃಚ್ಛಕರು-ಶ್ರೀ ಎಂ.ಆರ್ ಚಂದ್ರಮೌಳಿ
ವಸ್ತು-ಪಾರ್ಥೇನಿಯಂ ಗಿಡದ ಬಗ್ಗೆ
ಶ್ಲೋಕ||
ಪಾರ್ಥನಕ್ಷಯತೂಣೀರಂ ನಿನಗಾದುದೆ ಪುಟ್ಟಿಗಂ
ಪಾರ್ಥೇನಿಯಂ ಪರಾಕ್ರಾಂತಿಪ್ರೀತಿ ನಿನ್ನದು ಭಾವಿಸಲ್ ||
ಚೌಪದಿ||
ಪರದೇಶದಿಂ ಬಂದು ನಮ್ಮ ನೆಲದೊಳ್ ನಿಂದು
ಮರುಭೂಮಿಯಾಗಿಸುತೆ ವನಗಳನ್ನು
ಮೆರೆದುಬ್ಬಸಂದರ್ಪ ಪಾರ್ಥೇನಿಯಂ ನಿನಗೆ
ಗುರುವಾರೊ ಕಾಣೆನಾಂ ಲೋಕದಲ್ಲಿ||

೧೦-ಪ್ರೇಕ್ಷಕರೊಬ್ಬರು ದ್ರೌಪದಿಯನ್ನು ಕಂಡು ಕೃಷ್ಣನಿಗೆ ಏನೆನ್ನಿಸಿತು ಎಂದು ಪ್ರಶ್ನೆಯನ್ನು ಕಳಿಸಿದಾಗ ಹೇಳಿದ ಪದ್ಯ
ಕಂದ||
ಪಾಂಡವರೈವರ್ಗೊರ್ಕ-
ಟ್ಟಂಡಲೆಯುವ ಕಾಲದಲ್ಲಿಯುಂ ಸಲ್ಲಲ್ಕಂ
ಪಾಂಡಿತಿಯಿರ್ಪೀ ತರುಣಿಯೆ
ಪೆಂಡತಿ ದಲ್ ಯಾಜ್ಞಸೇನಿ ಮತ್ಕಾರ್ಯಾರ್ಥಂ ||