May 132012
 

ನಿಮಗೆ ಇಷ್ಟವಾದ ಛಂದಸ್ಸಿನಲ್ಲಿ, ವೀರ ರಸದ ಪದ್ಯಗಳನ್ನು ಬರೆಯಿರಿ

  7 Responses to “ಪದ್ಯಸಪ್ತಾಹ – ೨೦ – ಲಹರಿ”

  1. ಸದ್ಯದ ಅವಧಾನದಲ್ಲಿನ ಚಿತ್ರ ಕವಿತೆಯ ಪರಿಹಾರ
    ವಿಷಯ :: ಛಂದಸ್ಸಿನ ಬಗ್ಗೆ ವಿವರಣೆ, ವರ್ಣನೆ [ಇಲ್ಲಿನ ಪರಿಹಾರದ ಛಂದಸ್ಸ್ಸು – ಕಂದ]
    ಬಂಧ :: ಗೋಮೂತ್ರಿಕಾ – ೧,೩ ನೆ ಸಾಲುಗಳಲ್ಲಿ ಹಾಗು ೨,೪ ನೇ ಸಾಲುಗಳಲಿ, ಪ್ರತಿ ಎರಡನೆ ಅಕ್ಷರ ಒಂದೇ ಇರಬೇಕು

    ಕಂದನು ನಡೆವುದ ಕಲಿಯಲ್
    ಮಂದದ ಗತಿಯನ್ನು ತಾನು ತಿಳಿಯದ ತೋಷಂ
    ಕಂದವು ನಲಿವುದು ಕವಿಯಲ್
    ಛಂದದ ಗಡಿಯಲ್ಲೆ ತಾರೆ ತಿರೆಯಲೆ ತೋರ್ಗುಂ

    [ಇದು ವೀರ ರಸದ್ದಲ್ಲದಿದ್ದರೂ ಹಾಕಿದ್ದೇನೆ. ಮನ್ನಿಸಿ]

  2. Ram tumba chennagide 🙂

  3. ಸಮಯಮಿತಿ ಪ್ರಯೋಗದಲ್ಲಿ ವಿಭಿನ್ನ ಪ್ರಯತ್ನ, ದಯಮಾಡಿ ತಿದ್ದುವುದು

    ಬೆಂಕಿ ಬಿರುಸುಗಳಟಾಟೋಪ ದಿಂದಲಂ
    ಸಂಕಟಮಂ ತಂದಿರ್ಪ ರಕ್ಕಸ ಕಾರ್ಯವಂ ನೆನೆದೊಡೆ
    ತೆಂಕಿನಿಂದಲೇ ನುಸುಳಿ ಒಳಪೊಕ್ಕು ಎಲ್ಲರಂ ಹತಗೈದು
    ಬಿಂಕವನಳಿವಾಸೆ ಯೆನಗಂ ಪಾಕಿಗಳಂ ಕಂಡೊಡೆ

  4. ಕಿರಿದಾದೊಡೇಂ ಮೂರ್ತಿ ಪಿರಿದು ಕೀರ್ತಿಯದೆಂಬೆ;
    ಒರಲುತೊಳ್ಳೊಳ್ಳೆಂದು ಬರಲು ಕಳ್ಳಂ
    ಪರಿದು ಮೇಲೆರಗಿ ನೆಲಕೊರಗಿಸಲ್ಕಾಯಲಾ
    ಮರಿಯಾದೊಡೇಂ ನಾಯಿ ವೀರಮಲ್ತೆ?

  5. ಕಿರಿದಾದೊಡೇಂ ಮೂರ್ತಿ ಪಿರಿದು ಕೀರ್ತಿಯದೆಂಬೆ;
    ಭರತಭೂಮಿಯನಾಕ್ರಮಿಸಲು ದುಷ್ಟಂ
    ತರಿದು ಕೊರಳಂ ತಲೆಯ ಚೆಂಡಾಡಿ ನೆತ್ತರಿಂ
    ಧರೆಯ ತೊಳೆದಪನಲ್ತೆ ಗೋರ್ಖವೀರಂ

    ಕಾರ್ಗಿಲ್ ಕಾಳಗದ ಸಂದರ್ಭವನ್ನಾಧರಿಸಿ.

  6. ಕಂಡು ಹಿಡಿಂಬನು ಸಿಡಿಯಲ್
    ಮೊಂಡು ಹಿಡಿಂಬೆಯಳು ಗಂಡು ಕಲಿಯಂ ಕೂಡಲ್|
    ಕೊಂಡೊಡುಡುಂಬರಕಾಂಡವ
    ಚೆಂಡಾಡದೆ ಬಿಡುವನಲ್ಲ ಕಡು ಭೀಮ ಗಡಾ||

    • ’ಡ’ಕಾರತಾಡನವಷ್ಟೇ. ರಸಸ್ಫುರಣೆ ಬಹಳೇನಿಲ್ಲ.

Leave a Reply to Soma Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)