Jun 242012
 

ಕಥಾಸರಿತ್ಸಾಗರದಲ್ಲಿ ಬರುವ ಈ ಕೆಳಗಿನ ಪ್ರಸಂಗವನ್ನಾಧರಿಸಿ ಪದ್ಯಗಳನ್ನು ಬರೆಯಿರಿ.

  • ಇಲ್ಲಿರುವ ಪ್ರಸಂಗವನ್ನು ಬೇಕೆಂದಂತೆ ವಿಸ್ತರಿಸಿ.
  • ಸಾಧ್ಯವಾದಷ್ಟೂ ವರ್ಣನೆಗಳನ್ನು ಅಳವಡಿಸಿರಿ
  • ಕನಿಷ್ಠ ೪-೫ ಪದ್ಯಗಳನ್ನಾದರೂ ಬರೆಯಿರಿ.
  • ಪೂರ್ತಿ ಮುಗಿಸಲಾಗದಿದ್ದರೆ, ಎಷ್ಟು ಬರೆದಿದ್ದೀರೋ, ಅಷ್ಟೇ ಹಾಕಿ
  • ಛಂದಸ್ಸುಗಳ ಆಯ್ಕೆ ನಿಮ್ಮದೇ !

ಪ್ರಸಂಗ ::

ವ್ಯಾಡಿ, ಇಂದ್ರದತ್ತ ಹಾಗು ವರರುಚಿ ಎಂಬ ಮೂವರು ಸಬ್ರಹ್ಮಚಾರಿಗಳು (ಒಂದೇ ಗುರುವಿನ ಬಳಿ ಕಲಿಯುತ್ತಿರುವವರು) ಗುರುದಕ್ಷಿಣೆಗಾಗಿ ಒಂದು ಕೋಟಿ ಹೊನ್ನು ಕೊಡುವುದು ಬರುತ್ತದೆ. ನಂದರಾಜನು ಇದನ್ನು ಕೊಟ್ಟಾನು ಎಂದು ಮೂವರೂ ಒಟ್ಟಿಗೆ ಅಲ್ಲಿ ಹೋಗುತ್ತಾರೆ. ಆಷ್ಟರಲ್ಲಿ ರಾಜನು ಮೃತನಾಗುತ್ತಾನೆ. ಆಗ ಇಂದ್ರದತ್ತನು ತಾನು ರಾಜನ ಶರೀರದಲ್ಲಿ ಪರಕಾಯ ಪ್ರವೇಶ ಮಾಡುವುದಾಗಿಯೂ, ವರರುಚಿ ಬಂದು ಯಾಚಿಸಿದಾಗ ತಾನು ಹಣ ಕೊಡುವುದಾಗಿಯೂ ಹೇಳುತ್ತಾನೆ. ಈ ಮಧ್ಯೆ ಆತನ ಶರೀರವನ್ನು ಒಂದು ಮಂದಿರದೊಳಗಿರಿಸಿ ವ್ಯಾಡಿಯು ಕಾಯುವುದು ಎಂದೂ, ಕೆಲಸದನಂತರ ಇಂದ್ರದತ್ತನು ತನ್ನ ಶರೀರಕ್ಕೆ ಮರಳುವುದು ಎಂಬ ಯೋಜನೆಯಾಗುತ್ತದೆ.

ರಾಜನು ಮರಳಿ ಜೀವ ಪಡೆದು ಯಾಚಕನಾದ ವರರುಚಿಗೆ ಒಂದು ಕೋಟಿ ಹೊನ್ನುಗಳನ್ನು ಕೊಡಲು ಮಂತ್ರಿಯಾದ ಶಕಟಾಲನಿಗೆ ಆದೇಶಿಸುತಾನೆ. ರಾಜನು ಮರಳಿ ಜೀವ ಪಡೆದದ್ದನ್ನೂ, ಕೂಡಲೇ ದೊಡ್ಡ ಮೊತ್ತವನ್ನು ಯಾಚಕನಿಗೆ ಕೊಟ್ಟದ್ದನ್ನೂ ಕಂಡು ಸಂಶಯಗೊಂಡ ಮಂತ್ರಿಯು, ಚಿಕ್ಕವನಾದ ರಾಜಕುಮಾರ ವಯಸ್ಸಿಗೆ ಬರುವವರೆಗೂ ರಾಜನ ಜೀವ ಕಾಪಾಡುವ ತಂತ್ರ ಹೂಡಿ, ರಾಜ್ಯದಲ್ಲಿರುವ ಎಲ್ಲಾ ಹೆಣಗಳನ್ನೂ ಸುಡಿಸಿಬಿಡುತ್ತಾನೆ. ಇದರಲ್ಲಿ ಇಂದ್ರದತ್ತನ ಶವವೂ ಸುಟ್ಟುಹೋಗಿ, ಇಂದ್ರದತ್ತನು ರಾಜನ ಶರೀರದಲ್ಲಿ ಸಿಕ್ಕಿಹಾಕಿಕೊಂಡು ಬಿಡುತ್ತಾನೆ.

Jun 032012
 

ಶಾಸನ ಧಿಕ್ಕಾರವೇ ಪ್ರಶಸ್ತವದಲ್ತೇ

ಆಧಾರ : ತೆಲುಗಿನ ಬ್ಲಾಗ್ “ಶಂಕರಾಭರಣಂ”

 

ಲೇಸೈ  ಪದ್ಯಾಪೂರಣ’

ರಾಸಿಕ್ಯದ ರಾಜಧಾನಿ ರಸಪದಪಾನಂ

ಯೀಸುಲಭ ಸಮಸ್ಯೆಯನು ಸ

ಲೀಸಾಗಿಸಬಲ್ಲರಲ್ತೆ ಲೀಲೋತ್ಸಾಹರ್