Jun 092013
 

ಈ ಬಾರಿ ಸಾಮೂಹಿಕ ಕಥಾರಚನೆಯ ವಿಷಯವನ್ನು ಮಹಾಭಾರತದಿಂದ ಆಯ್ದುಕೊಳ್ಳಲಾಗಿದೆ :: “ದ್ಯೂತ ಕ್ರೀಡೆಯಲ್ಲಿ ದ್ರೌಪದಿಯ ವಸ್ತ್ರಾಪಹರಣದ ಸಂದರ್ಭ“.  ಯುಧಿಷ್ಠಿರ ದ್ರೌಪದಿಯನ್ನು ಪಣವಾಗಿರಿಸಿದಲ್ಲಿಂದ ಮೊದಲ್ಗೊಂಡು, ವಸ್ತ್ರಾಪಹರಣವನ್ನೊಳಗೊಂಡು, ಕೃಷ್ಣ ನೀಡುವ ಅಕ್ಷಯಾಂಬರದ ವರೆಗೆ ವರ್ಣಿಸೋಣ.

ದ್ರೌಪದಿಯ ವಸ್ತ್ರಾಪಹರಣ

ದ್ರೌಪದಿಯ ವಸ್ತ್ರಾಪಹರಣ

ಪಾಂಡವರ ನಿಸ್ಸಹಾಯಕತೆ, ಶಕುನಿಯ ಕಪಟ, ಕೌರವರ ದುರಹಂಕಾರ, ದುರ್ನಡತೆ, ರಾಜಸಭೆಯಲ್ಲಿನ ಹಿರಿಯರ ನಿರ್ವೀರ್ಯತೆ, ದ್ರೌಪದಿಯ ಸಂಕಟ, ಕೃಷ್ಣನಲ್ಲಿ ತೋಡಿಕೊಳ್ಳುವ ಅಳಲು, ಕೃಷ್ಣನ ಕಾರುಣ್ಯ – ಎಲ್ಲವನ್ನೂ ತೆಗೆದುಕೊಳ್ಳಬಹುದು.

೨ ವಾರಗಳ ಕಾಲ ಈ ಸಪ್ತಾಹ ನಡೆಯಲಿ [:-)]. ಕಥೆಯನ್ನು, ವರ್ಣನೆಗಳನ್ನು, ಭಾವಗಳನ್ನು ಸವಧಾನದಿಂದ, ವಿಸ್ತಾರವಾಗಿ ನಡೆಸಲು ಪ್ರಯತ್ನಿಸೋಣ.

ಎಂದಿನಂತೆ ಛಂದಸ್ಸು ನಿಮ್ಮ ಆಯ್ಕೆ.

[ಚಿತ್ರದ ಕೃಪೆ – dollsofindia.com]

Apr 292013
 

ಈ ಬಾರಿಯ ಸಾಮೂಹಿಕ ಕಥಾರಚನೆಯ ವಿಷಯ :: “ರಾಮ, ಲಕ್ಷ್ಮಣ ಹಾಗೂ ಸೀತೆಯರು ವನವಾಸಕ್ಕೆಂದು ಅಯೋಧ್ಯೆಯಿಂದ ತೆರಳಿದ್ದು“. ವನವಾಸಕ್ಕೆ ತೆರಳುವುದೇ ಹೌದೆಂದು ರಾಮ ನಿರ್ಧಾರ ಮಾಡಿದ್ದಾನೆ ಎಂಬಲ್ಲಿಂದ ತೆಗೆದುಕೊಂಡು, ಅಯೋಧ್ಯೆಯನ್ನು ದಾಟುವ ವರೆವಿಗು ಕಥೆಯನ್ನು ತೆಗೆದುಕೊಂಡೊಯ್ಯೋಣ.

ಈ ಕಥೆಯಲ್ಲಿ, ಲಕ್ಷ್ಮಣ ಹಾಗೂ ಸೀತೆಯರು ತಾವೂ ಬರಬೇಕೆಂದು ಹಠ ಮಾಡಿದ್ದು, ಅವರನ್ನು ನಿರಾಕರಿಸುವುದಕ್ಕೆ ರಾಮ ಮಾಡಿದ ಪ್ರಯತ್ನ, ಹೋಗಬೇಡ ಎಂದು ಕೆಲವರು ದುಂಬಾಲು ಬಿದ್ದದ್ದು, ಅಯೋಧ್ಯೆಯ ಪ್ರಜೆಗಳು ಹಿಂಬಾಲಿಸಿದ್ದು, ಎಲ್ಲವನ್ನು ವಿಷಯಕ್ಕೆಂದು ತೆಗೆದುಕೊಳ್ಳಬಹುದು.

ಎಂದಿನಂತೆ, ನಿಧಾನವಾಗಿ ಅನೇಕ ವರ್ಣನೆಗಳಿಗೆ ಅವಕಾಶವಿಟ್ಟುಕೊಂಡು ಬರೆಯೋಣ. ಯಾವ. ಛಂದಸ್ಸು ಬೇಕಾದರೂ ಆಯ್ದುಕೊಳ್ಳಬಹುದು.

[ಈ ವಿಷಯಕ್ಕೆ  ಸಾಮೂಹಿಕವಾಗಿ ನ್ಯಾಯ ಒದಗಿಸಬೇಕೆಂದರೆ, ೨ ವಾರಗಳಷ್ಟಾದರೂ ಬೇಕಾದೀತು – ಆದುದರಿಂದ ಈ ಕಂತಿಗೆ ಪದ್ಯ ಸಪ್ತಾಹದ ಬದಲು ಪದ್ಯ ಪಕ್ಷ ಎಂದಾದರೂ ಹೇಳಬಹುದು. ಕಥೆ ಹೇಗೆ ಬೆಳೆಯುತ್ತದೆ ಎಂದು ನೋಡೋಣ.]

Mar 172013
 

ಎಲ್ಲರೂ ಕೂಡಿ ಸೀತಾ ಕಲ್ಯಾಣದ ಕಥೆಯನ್ನು ಬೆಳೆಸೋಣವೇ?

ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕರೆದುಕೊಂಡು ಮಿಥಿಲೆಯೆಡೆಗೆ ಬರುತ್ತಿದ್ದಾರೆ. ಅಹಲ್ಯಾ ಪ್ರಕರಣ ಮುಗಿದಿದೆ. ಇಲ್ಲಿಂದ ಶುರುಮಾಡಿ ಸೀತಾ-ರಾಮರ ಕಲ್ಯಾಣದವರೆವಿಗೂ ಕಥೆಯನ್ನು ಬೆಳೆಸೋಣ. ನಿಧಾನವಾಗಿ ಅನೇಕ ವರ್ಣನೆಗಳಿಗೆ ಅವಕಾಶವಿಟ್ಟುಕೊಂಡು ಬರೆಯೋಣ – ಅಂದರೆ ನಾಗಲೋಟದಲ್ಲಿ ಕಥೆಯನ್ನು ಓಡಿಸುವುದು ಬೇಡ.

ಯಾವ ಛಂದಸ್ಸು ಬೇಕಾದರೂ ಆಯ್ದುಕೊಳ್ಳಬಹುದು. ವರ್ಣನೆಗಳಿಗೆ ಅನೇಕ ಅವಕಾಶಗಳಿವೆ. ಉದಾರವಾಗಿ ಬಳಸಿಕೊಳ್ಳಿ. 🙂