ಕನ್ನಡರೂಪಾಂತರ
ನಿರುಪಹತಿಸ್ಥಲಂ ಸುರಮಣೀ ಪ್ರಿಯದೂತಿಕೆ ತಂದುಕೊಟ್ಟ ಕ-
ಪ್ಪುರದೆಲೆ, ಯಾತ್ಮಕಿಂಪಹ ಸುಭೋಜನ, ವುಯ್ಯಲೆ ಮಂಚ, ಮೊಪ್ಪು ತ-
ಪ್ಪರಿತ ರಸಜ್ಞರೂಹೆ ತಿಳಿವಂಥಹ ಲೇಖಕ, ಪಾಠಕೋತ್ತಮರ್
ದೊರಕಿದರಲ್ತೆ, ಕಾವ್ಯಗಳ ಸುಮ್ಮನೆ ಲೇಖಿಸೆನಲ್ಕೆ ಶಕ್ಯಮೇ
ಮೂಲ ಪದ್ಯ
ನಿರುಪಹತಿಸ್ಥಲಂಬು ರಮಣೀಪ್ರಿಯದೂತಿಕ ತೆಚ್ಚಿಯಿಚ್ಚು ಕ
ಪ್ಪುರವಿಡೆ ಮಾತ್ಮಕಿಂಪಯಿನ ಭೋಜನ ಮುಯ್ಯಲಮಂಚ ಮೊಪ್ಪು ತ
ಪ್ಪರಯು ರಸಜ್ಞುಲೂಹ ತೆಲಿಯಂಗಲ ಲೇಖಕ ಪಾಠಕೋತ್ತಮುಲ್
ದೊರಕಿನ ಗಾಕ ಯೂರಕ ಕೃತುಲ್ರಚಿಯಿಂಪುಮಟನ್ನ ಶಕ್ಯಮೇ
ಆಂಧ್ರ ಕವಿತಾ ಪಿತಾಮಹನೆಂಬ ಖ್ಯಾತಿಯ ಅಲ್ಲಸಾನಿಪೆದ್ದನ ರಚಿಸಿದ ಪದ್ಯವಿದು. ಕಾವ್ಯರಚನೆಗೆ ಯಾವ ಸೌಕರ್ಯಗಳಿದ್ದರೆ ಅನುಕೂಲ ಎಂಬುದರ ಪಟ್ಟಿ ಇಲ್ಲಿದೆ ! ಜನ ಜಂಗುಳಿಯಿರದ ಏಕಾಂತ ಪ್ರದೇಶ, ಮಧ್ಯ ಮಧ್ಯೆ ಪ್ರಿಯೆ ತನ್ನ ದೂತಿಯ ಮೂಲಕ ಕಳಿಸಿ ಕೊಡುವ ಕರ್ಪೂರ ತಾಂಬೂಲ, ಮನಸ್ಸಿಗೆ ತೃಪ್ತಿಯಾಗುವ ರುಚಿಕರವಾದ ಭೋಜನ, ಕುಳಿತು ತೂಗಾಡಲು ಉಯ್ಯಾಲೆಯ ಮಂಚ, ತನ್ನ ರಚನೆಯಲ್ಲಿ ಸರಿ ತಪ್ಪುಗಳನ್ನು ತಿಳಿಯುವಂಥ ರಸಜ್ಞರು, ಕವಿಯ ಆಶಯವನ್ನು ಊಹೆಯಿಂದ ಗ್ರಹಿಸಬಲ್ಲ ಲಿಪಿಕಾರರು, ಪಾಠಕರು ಇವೆಲ್ಲಾ ಸೌಕರ್ಯಗಳಿರದೆ, ಸುಮ್ಮನೆ ಕಾವ್ಯಗಳನ್ನು ಬರೆಯಿರಯ್ಯ ಎಂದರೆ ಸಾಧ್ಯವೇ ಎನ್ನುತ್ತಾನೆ ಪೆದ್ದನ !
