Mar 192018
 

ಕೆಳಕಂಡ ವಸ್ತುಗಳನ್ನು ವರ್ಣಿಸಿ ಪದ್ಯರಚಿಸಿರಿ:

೧. ಧರ್ಮದ ದಾರಿ

೨. ದಿನದರ್ಶಿಕೆ (Calendar)

೩. ರಾವಣನ ಶ್ರಾದ್ಧಕ್ಕೆ ಬಂದ ಬ್ರಾಹ್ಮಣರು

೪. ಕೋಗಿಲೆ

  23 Responses to “ಪದ್ಯಸಪ್ತಾಹ ೨೯೯: ವರ್ಣನೆ”

  1. ರಾವಣನ ಶ್ರಾದ್ಧಕ್ಕೆ ಬಂದ ಬ್ರಾಹ್ಮಣರ ಸಂಭಾಷಣೆ
    ವಿಪ್ರ೧: ಏದೊರೆ ಬಣ್ಣಿಪೆಮ್!? ವಡೆಯ ರೂಪಮನಕ್ಷಿಗಮಂತೆ ಕುಕ್ಷಿಗಂ
    ಹ್ಲಾದಮನೀವುದೈ (ವಿ ೨:)ಬುಧರೆ! ಪಾಯಸಮಂ ಮರೆತಿರ್ಪಿರೆಂತುಟೈ?
    (ವಿ ೩:)ಬೂದಿಯ ಬಣ್ಣಮಂ ತಳೆದ ಕುಂಬಳದೀ ಪುಳುಶೇರಿದದ್ಭುತಂ!
    ಮೂದಲಿಕುಂ ಗಡೀ ತಿಥಿಯ ಭೋಜನಮಾ ಸೊದೆಯಮ್ ವಿಭಾವಿಸಲ್
    (ವಿ ೪:)ಸೋದರಮಾದೊಡಂ ಸವಿಯ ಮಧ್ಯದೊಳೆಂತುಟು
    ಕಯ್ಮೆ ವಂದುದಾ (ಹಿರಿಯ ವಿ:)
    ಹ್ಲಾದದೊಳಿರ್ಪ ದಂಪತಿಯ ಜೀವನದೊಳ್ ಪುಳಿವಿಂಡಿದಂ ಲಸ
    ತ್ಸ್ವಾದದೆ ಕಯ್ಪು ತೋರ್ದುದು ಮಹೀಸುರರಿಂತೆನುತುಂಡು ಪೋಗೆ ಮಂ
    ಡೋದರಿಯಶ್ರುವಂ ಸುರಿಸುತಿರ್ಪುದನಾವನುಮೀಕ್ಷಿಸಿಲ್ಲ ಹಾ!!

  2. ಧರ್ಮದ ದಾರಿ!
    ಏಳೆ|| ಶರ್ಮ, ನೀನರಿಯೆಯೇಂ ಧರ್ಮಮೇ ದಾರಿಯು
    ಮರ್ಮಮಿದೇಂ ದಾರಿಯ ದಾರಿ?

  3. ಕೋಗಿಲೆ
    ಮಾಕಂದರಸೋನ್ಮತ್ತಂ
    ಶ್ರೀಕರ ಸುರಭಿದಳತೂರ್ಯನಾದಕರಂ ಮೇಣ್/
    ಕಾಕವಿಟಂಕವಿನಿರ್ಯ
    ತ್ಕೋಕಿಲಮೇ೦ ಶಂಬರಾರಿಶಂಖಮೆ ಬಗೆಯಲ್//

  4. ವೇದೋದ್ಘೋಷಕಮಂತೆಯೆ
    ಯಾದವವಂಶಿಗಮಜಸ್ರಮುಂ ಶ್ರುತಿಯಾಯ್ತೀ
    ನಾದಂ ಕೋಕಿಲಗಾನಮ
    ದೇದೊರೆತೀ ಪಿಕಸಮೂಹಗಾನಾಭ್ಯಾಸಂ//
    ವೇದದ ಗಾನಕ್ಕೆ , ಕೃಷ್ಣನ ಕೊಳಲಿಗೆ ಕೋಗಿಲೆಯ ಗಾನವೇ ಶ್ರುತಿಯಾಯ್ತು. ಅಂದರೆ ಈ ಕೋಗಿಲೆಗಳ ಗಾನಾಭ್ಯಾಸ ಯಾವತೆರನಾದ್ದಾಗಿರಬಹುದು…?

  5. ಧರ್ಮಮಾರ್ಗ
    ಕ್ಷುರಧಾರೆಯೆ ತಾನೆಂದರ್ ಕವಿಗಳ್ ಧರ್ಮಮಾರ್ಗಮಂ
    ಕೊರೆಗುಂ ನಿಚ್ಚಮುಂ ನೋಂತಿರ್ಪನನೀ ಕಲಿಗಾಲದೊಳ್
    ಕವಿ=ವೇದಾಂತದ ಕವಿಗಳು
    Inspired by ಕ್ಷುರಸ್ಯಧಾರಾನಿಶಿತಾ…..

  6. “ದಿನದರ್ಶಿಕೆ ”

    ಚಣಚಣದನುರಣನಕದೊ ಸ-
    ರಣಿ ಗಡಿಯಾರಗಳ ರಿಂಗಣಂ ಧಾರುಣಿಯೊಳ್ |
    ಎಣಿಸಲೆಣಿಸೆ ದಿನವಂ ಮೇಣ್
    ಅಣಿಗೊಳುದೇಳೇಳು ಚೌಕಗಳ ರಂಗಂ ತಾಂ ||

    • ಚೆನ್ನಾಗಿದೆ ಗಡಿಯಾರವನ್ನ ದಿನದರ್ಶಿಕೆಯೊಡನೆ ಹೋಲಿಸಿದ ಪದ್ಯ… ಆದರೆ ಏಳೇಳು ಚೌಕಗಳು ಹೇಗಾಗುತ್ತದೆ 🙂

      • ಧನ್ಯವಾದಗಳು ಸೋಮ , ವಾರ ವಾರಕ್ಕೆ ಏಳೇಳು ಮನೆಗಳು !?

  7. ರಾವಣನ ಶ್ರಾದ್ಧಕ್ಕೆ ಬಂದ ಬ್ರಾಹ್ಮಣರು:

    ಮೂರೂ ತಲೆಗಳಿಗೆ ಇಕ್ಕಿದ ಪಿಂಡಗಳ
    ಈರೈದು ತಲೆಯವ ಮುಕ್ಕಿದ ತಾನಂತೆ!
    ಹಾರುವರು ಪೇಳ್ವುದ ಲೆಕ್ಕಿಸದಾ ಭಂಡ
    ದೂರುವದು ಶ್ರಾದ್ಧಲೋಪವೆಂದೇತಕೆ?

    ೧೮ ಮಾತ್ರೆಯ ಪಾದಗಳಿಗೆ ಅಳವಡಿಸಿದ್ದೇನೆ. ಯಾವ ಛಂದಸ್ಸಿಗೆ ಕೂಡುತ್ತದೆಯೋ ಗೊತ್ತಿಲ್ಲ.
    ಪದ್ಯಪಾನಿಗಳು ದಯಮಾಡಿ ಪರಾಮರ್ಶಿಸಿರಿ.

    -ಪ್ರಭು

    • ಪದ್ಯ ಚೆನ್ನಾಗಿದೆ. ಹೀಗೆ ಮಾಡಲೇನೂ ಅಡ್ಡಿಯಿಲ್ಲ. ರಗಳೆ ಎನ್ನಿಸಿಕೊಳ್ಳುತ್ತದೆ. ಆದರೆ ನಿಮ್ಮ ಪದ್ಯದಲ್ಲಿ ಮಾತ್ರಾಗತಿ ಇಲ್ಲ. ೧೮ ಮಾತ್ರೆಗಳ ಸಾಲಾದ್ದರಿಂದ ಪ್ರತಿ ಸಾಲಿನಲ್ಲಿ ೩ ಮಾತ್ರೆಗಳ ೬ ಗಣಗಳನ್ನಿಟ್ಟು ಬರೆಯಲು ಪ್ರಯತ್ನಿಸಿ(೩-೩-೩-೩-೩-೩).
      ಹಾಗೆಯೇ “ತಲೆಗಳಿಗೆ ಇಕ್ಕಿದ” ಎಂಬಲ್ಲಿ ವಿಸಂಧಿದೋಷ ತಲೆದೋರಿದೆ. ಅದು “ತಲೆಗಳಿಗಿಕ್ಕಿದ” ಎಂದಾಗಬೇಕು. “ಪಿಂಡಗಳ ಈರೈದು” ಎಂಬುದನ್ನು “ಪಿಂಡಗಳನೀರೈದು” ಎಂದಾಗಿಸಿದರೆ ಉತ್ತಮ.

  8. ದಿನದರ್ಶಿಕೆ:
    ದಿನದರ್ಶಿಕೆ ತಾಂ ಕಾಲದ
    ಮನಮಂ ತೋರ್ಪಂತೆ ಬೀಗೆ ಮುಂಬರ್ಪುಗಳೊಳ್
    ಜನರಂ ತೀರ್ಮಾನಕೆಳೆಯೆ
    ಘನಮಾಯೆಯ ಹಾಳೆಗಳೆಯೆ ಗೆಲ್ವುದು ವಿಧಿಯಯ್

    ರಾವಣನ ಶ್ರಾದ್ಧಕ್ಕೆ ಬಂದ ಬ್ರಾಹ್ಮಣರ ಮಾತು:
    ಚಿತ್ತಂ ಕಂಪಿಪ ಭಯಕಂ
    ತುತ್ತಾದರ್ ಜನರುಮಂತೆ ದೇವರ್ಕಳೆ ಹಾ
    ಮತ್ತೀ ದುರುಳಾತ್ಮದ ಕೃತಿ
    ಪತ್ತೆನೆ ಘೋರಮಲ ಗೆಯ್ವುದಯ್ ಸದ್ಗತಿಗಂ

    ರಾವಣನಿಗೆ ಸದ್ಗತಿ ಕೊಡಿಸುವ ಅವಶ್ಯಕತೆಯನ್ನ ಬ್ರಾಹ್ಮಣರು ಮಾತಾಡಿಕೊಂಡರು… ಇಲ್ಲದಿದ್ದರೆ ಅವನ ದುರುಳಾತ್ಮವು ಹತ್ತು ಪಟ್ಟು ಘೋರವಾಗಬಹುದೆಂದು

    ಧರ್ಮದ ಪಥ:
    ಧರ್ಮವ್ಯಾಲನೆ ಪಾರ್ವಂ
    ಧರ್ಮಜನುಂ ಭೀಷ್ಮರಂತೆ ಪಾರ್ವರರಿಯನಯ್
    ಮರ್ಮಮಿದೇಂ ದೇವನುಲಿದ
    ಕರ್ಮದ ಪಥದಿಂದೆ ಗೆಲ್ದರೇನಿವರೆಲ್ಲರ್?

  9. ಧನ್ಯವಾದಗಳು ಮಂಜವರೆ!
    ನಿಮ್ಮ ಸೂಚನೆಯಂತೆ ಬರೆಯಲು ಪ್ರಯತ್ನಿಸುವೆ.
    -ಪ್ರಭು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)