Dec 182018
 

೧. ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ

ಬಿಳಿವೋದಂ ನಲವಿಂ ಜನಾರ್ದನಂ

ಗತಿ:
ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)
ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು)

೨. ಕಂದಪದ್ಯದ ಸಮಸ್ಯೆ

ಪತಿಗಂ ಪೀಡೆಯೆ ಕಿಡೆಂದಳೈ ಸತಿಯೊರ್ವಳ್ 

  23 Responses to “ಪದ್ಯಸಪ್ತಾಹ ೩೩೮: ಸಮಸ್ಯಾಪೂರಣ”

  1. ವಿನೋದವಾಗಿ :

    ಅತಿಸಲುಗೆಯಿಂದೊಡನಿರುತೆ
    ಪತಿಗಂ ಗತಿಗೆಡಿಸಿರಲ್ ಸಕುನಿಯೋಲ್ ಸತತಂ ।
    ಮತಿವೆತ್ತ ಕಿರಾತ ಕಿತಾ-
    ಪತಿಗಂ ಪೀಡೆಯೆ ಕಿಡೆಂದಳೈ ಸತಿಯೊರ್ವಳ್ ।।

    (ಗಂಡನನ್ನು ದಾರಿತಪ್ಪಿಸುತ್ತಿರುವ ಕಿತಾಪತಿ ಗೆಳೆಯನನ್ನು ಸತಿಯೋರ್ವಳು ನಿಂದಿಸುವ ಬಗೆ )

    • ಸೊಗಸಾದ ಪರಿಹಾರ ಮೇಡಮ್! ಕೆಲವು ಅರಿಸಮಾಸಗಳಿವೆ ಅತಿಸಲುಗೆ, ಕಿರಾತಕಿತಾಪತಿ. ಸಕುನಿಯವೊಲ್ ಆಗಬೇಕು 🙂

      • ಧನ್ಯವಾದಗಳು ನೀಲಕಂಠ , ಕಿರಾತ ಕಿತಾಪತಿ ಎರಡೂ “ಸಂಸ್ಕೃತ”ವಲ್ಲವೇ ?!

        • ಕಿತಾಪತಿ ಸಂಸ್ಕೃತವೇ? ಅಲ್ಲ ಅನಿಸುತ್ತದೆ. ಕನ್ನಡದ ಬಳಕೆಯ ಪದ.

  2. ಬಳೆದಂ ಯಮುನಾತಟಂಗಳೊಳ್
    ತಳರ್ದಂ ನೀಲಿಮೆಯಂ ತದೀಯಕಂ
    ಕೆಳೆಯಿಂ ವೃಷಭಾನುಪುತ್ರಿಯೊಳ್
    ಬಿಳಿವೋದಂ ನಲವಿಂ ಜನಾರ್ದನಂ

    ಕಪ್ಪಗಿರುವ ಯಮುನೆಯ ದಡದಲ್ಲಿ ಬೆಳೆದು ಅದೇ ಬಣ್ಣವನ್ನು ಹೊಂದಿದ. ಗೌರಾಂಗಳಾದ ರಾಧೆಯ ಗೆಳೆತನದಲ್ಲಿ ಬಿಳಿಯಾದ.

    • ತದ್ವಿರುದ್ಧವಾದ ಕವಿಕಲ್ಪನೆಯೂ ಇದೆ. ರಾಧೆ ಬೆಳ್ಳಗಿರುವಳು, ನಾನೇಕೆ ಕಪ್ಪಗಿರುವೆ ಎಂದು ತಾಯಿಯನ್ನು ಕೃಷ್ಣನು ಕೇಳಲು, ನೀನು ಮಧ್ಯರಾತ್ರಿಯಲ್ಲಿ ಹುಟ್ಟಿದೆ, ನೀನು ಕಪ್ಪುಕಂಬಳಿಯವನು (ಗೊಲ್ಲ), ಆ ಬೆಳ್ಳಗಿನ ರಾಧೆಯ ಕಪ್ಪುಕಣ್ಣಿನ ಮೋಡಿ ಇವುಗಳಿಂದ ಕಪ್ಪಾಗಿರುವೆ ಎನ್ನುತ್ತಾಳೆ. https://www.youtube.com/watch?v=5x0O-qR527U

    • +Like

  3. ಕಿತವವ ಗೈದಿಹೆ ನನ್ನೊಳ್,
    ಚತುರತೆಯಿಂ ಮೇಣ್ ವಶೀಕರಣದಿಂ ನೀಂ ದುರ್|
    ಗತಿಯಂ ತಂದಪೆ ಎನ್ನಯ
    ಪತಿಗಂ! ಪೀಡೆಯೆ ಕಿಡೆಂದಳೈ ಸತಿಯೊರ್ವಳ್||

  4. ಅತಿಗೈಯದೆ, ಅನುವಾಗಲ್ (ಅವಕಾಶ)
    ಜೊತೆಗೂಡಲುಬೇಕೆನುತ್ತೆ ಸಂಯಮದಿರೆ ತಾಂ|
    ರತಿಗುತ್ತೇಜಿಸುತಿರ್ಪುಪ-
    ಪತಿಗಂ ಪೀಡೆಯೆ ಕಿಡೆಂದಳೈ ಸತಿಯೊರ್ವಳ್||
    (ಉಪಪತಿ – Paramour)

  5. ಗತಿಸಲ್ ಭರ್ತಂ ಯುದ್ಧದೆ
    ಚಿತೆಗಗ್ನಿಯ ಸ್ಪರ್ಶಿಪಾಗ ಪುತ್ರಂ, ರುಷೆಯಿಂ|
    ಮತಿಗೆಟ್ಟು ವೈರಿಪೃತನಾ-
    ಪತಿಗಂ ಪೀಡೆಯೆ ಕಿಡೆಂದಳೈ ಸತಿಯೊರ್ವಳ್||
    (She cursed the commander of the enemy army)

    • Ahaa.. all nice puuraNas!! ಅವಸರ(ಅವಕಾಶ) ಬರೆ – should be like ಅವಸರo ಬರೆ
      ಕ್ರೋಧದೆ – last guru missing.

      • ಧನ್ಯವಾದ. ಲೋಪಗಳನ್ನು ತೋರಿಸಿಕೊಟ್ಟುದಕ್ಕಾಗಿ ಮತ್ತೊಂದು ಧನ್ಯವಾದ. ತಿದ್ದಿದ್ದೇನೆ.

    • ಸೊಗಸಾದ ಪೂರಣ ಪ್ರಸಾದ್ ಸರ್,
      “ಚಿತೆಗಗ್ನಿಯ ಸ್ಪರ್ಶಿಪಾಗ … ” ಒಂದು ಲಗು ಹೆಚ್ಚಾಯಿತಲ್ಲವೇ ?

  6. ಬಳರಾಮನೊಡಾಡೆ ಕಣ್ಣುಮು-
    ಚ್ಚಳುವಾಗಲ್ ಗೆಲಲೆಂದಡಂಗಿರಲ್
    ಬಳಿತಾಯುಡೆ ಬೆಳ್ ಸೆರಂಗಿನೊಳ್
    ಬಿಳಿವೋದಂ ನಲವಿಂ ಜನಾರ್ದನಂ !!

    ಅಣ್ಣ ಬಲರಾಮನ ಜೊತೆ ಕಣ್ಣಾಮುಚ್ಚಾಲೆಯಾಡುವಾಗ ಬಳಿಯಿದ್ದ “ಬಿಳಿಸೀರೆ”ಯುಟ್ಟ ಯಶೋದೆಯ ಸೆರೆಗಿನಲ್ಲಿ ಅಡಗಿದ ಕೃಷ್ಣ “ಬಿಳಿ”ಯಾದ !!

  7. ಎಳವೊಳ್ ಕೆಳೆಯೊಂದಿಗೈದುತುಂ
    (ಕದಿಯುತ್ತಾನೆ) ಕಳುವಂ ಬೆಣ್ಣೆಯ ತಾಂ ಸದೇಶದೊಳ್ (Neighbourhood)|
    ಬೞೆಕೊಂಡದ ಕೆನ್ನೆಗಲ್ಲಕಂ
    ಬಿಳಿವೋದಂ ನಲವಿಂ ಜನಾರ್ದನಂ||

  8. ಅತಿಕಾಮಾಸಕ್ತಿಯೊಡಂ
    ಮತಿಹೀನನುಮಾಗಿ ತನ್ನೊಳೆರಗುತೆ ಸೆಳೆದಾ
    ಕೃತಿಯಂ ಬದಲಿಸೆ ಲಂಕಾ
    ಪತಿಗಂ ಪೀಡೆಯೆ ಕಿಡೆಂದಳೈ ಸತಿಯೊರ್ವಳ್

    ಸನ್ಯಾಸಿಯ ವೇಷದಲ್ಲಿದ್ದ ರಾವಣ ಸೀತೆಗೆ ನಿಜರೂಪ ತೋರಿದ ಪ್ರಸಂಗ

    • ಕಲ್ಪನೆ/ಕೀಲಕನಿರ್ವಹಣೆಗಳು ಚೆನ್ನಾಗಿವೆ. ‘ಅತಿಕಾಮಾಸಕ್ತಿಯೊಡಂ ಮತಿಹೀನನುಮಾಗಿ ತನ್ನೊಳೆರಗುತೆ ಸೆಳೆದಾಕೃತಿಯಂ’ ಎಂಬುದು ಅವನ ನಿಜರೂಪ(ಸ್ವಭಾವ)ವಾದ್ದರಿಂದ, ರಾಕ್ಷಸನು ರಾಕ್ಷಸನಾಗಿ ಬದಲಾಯಿಸಿದ ಎಂದಂತಾಗುತ್ತದೆ. ’ಸನ್ಯಾಸಿರೂಪಿನಿಂ ಸೆಳೆದಾಕೃತಿಯಂ’ ಎನ್ನಬಹುದಲ್ಲವೆ?

    • ಚೆನ್ನಾಗಿದೆ. ಆದರೆ ಸತಿಯೊರ್ವಳ್ ಎಂದು ಸಮಸ್ಯಾಪಾದದಲ್ಲಿರುವುದರಿಂದ ಲಂಕಾಪತಿ, ಸೀತೆ ಎಂದು ವಿಶೇಷಸಂದರ್ಭಕ್ಕೆ ಅನ್ವಯಿಸುವುದು ಕಷ್ಟವಾಗುತ್ತದೆ.

  9. ಇಳೆಯೊಳ್ ಜರುಗಿರ್ಪ ಪೂಜೆಯೊಳ್
    ಬೆಳು ಪಾಲೊಳ್ ಜಳಕಂ ಸಲಲ್ ಗಡಾ
    ತುಳುಕಲ್ ಶಿರದಿಂದೆ ಪಾದಕಂ
    ಬಿಳಿವೋದಂ ನಲವಿಂ ಜನಾರ್ದನಂ !!

    ಕ್ಷೀರಾಭಿಷೇಕದ ಕಲ್ಪನೆ !!

Leave a Reply to ನೀಲಕಂಠ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)