Jul 042020
 

ಶಶಿಕಿರಣ್ ರವರ ಪದ್ಯ
भूयान्नः समवर्तिवर्तनपरिज्ञानप्रतिष्ठापितं
निर्णिक्तं नचिकेतसः, पितृवचःप्रामाण्यधिक्कारजम्।
प्रह्लादस्य, निजाम्बिकागृहविशत्तातावरोधात्मकं
दौर्लालित्यममोघमप्रतिभटं तद्भूयसे श्रेयसे।।
(ಯಮನ ವರ್ತನೆಯ ಹಿಂದಿರುವ ತತ್ತ್ವವನ್ನು ತಿಳಿಯಬಯಸಿದ ನಚಿಕೇತನ, ತಂದೆಯ ಮಾತನ್ನೂ ಲೆಕ್ಕಿಸದ ಪ್ರಹ್ಲಾದನ, ಅಮ್ಮನ ಮನೆಯೊಳಗೆ ಹೋಗಲು ಬಯಸಿದ ತನ್ನ ತಂದೆಯನ್ನೇ ತಡೆದ ಗಣಪತಿಯ ಮೊಂಡುತನ ನಮಗೆ ಅಪಾರಶ್ರೇಯಸ್ಸನ್ನು ಕರುಣಿಸಲಿ.)

ರವೀಂದ್ರಹೊಳ್ಳರ ಪದ್ಯ
ಕಂದನ ಕೋಪದಿಂ ಬಡವಳಾಗಿರೆ ಲಕ್ಷ್ಮಿ, ಸರಸ್ವತಿ ಪ್ರತಿ-
ಸ್ಪಂದಿಸಿ ಯುಕ್ತಿಗಾಣದಿರೆ ಪಾರ್ವತಿ ಯತ್ನಿಸಿ ಶಕ್ತಿಗುಂದಿರಲ್|
ನಂದಿನಿ ಬಂದು ಪಾಲುಣಿಸಿ ಲಾಲಿಸಿ ನಿದ್ರಿಸೆ ತೋರಿದತ್ತು ಬಾ
ಲೇಂದುವೆ ಕಾಂತಿಯಿಂ ಮುಗಿಲಿನೊಲ್ಮೆಯ ತೊಟ್ಟಿಲನೇರಿದಂತೆಯೋಲ್||
(ಮಕ್ಕಳ ಹಟಕ್ಕೆ ಎಷ್ಟೋ ಬಾರಿ, ಮೂಲಕಾರಣ, ಹಸಿವು ನಿದ್ರೆಯೇ ಆದಾಗ, ದುಡ್ಡು, ಬುದ್ಧಿ, ಶಕ್ತಿ ಸೋಲುತ್ತದೆ.)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)