Jan 272021
 

೧. ಗೆಣಸು

೨. ಕೈಚೀಲ

೩. ವಿಭೂತಿ ನಾಮದ ಸಂವಾದ

೪. ವಸಂತತಿಲಕದ ಸಮಸ್ಯೆ
ಕೈಲಾಸಮಂ ಶರಧಿಮಧ್ಯದೆ ಶಂಭು ಕಾಂಬಂ
ईशो ददर्श तुहिनाचलमब्धिमध्ये

  13 Responses to “ಪದ್ಯಸಪ್ತಾಹ ೪೩೨”

  1. ತೇಲಾಡುತಿರ್ಪ ಜಲವಾಹ, ತುಷಾರ(ice/snow) ಮೇಣಿಂ
    ಫಾಲಾಕ್ಷಶೀರ್ಷಪತಿತದ್ರವರೂಪಮೆಲ್ಲಂ|
    ಮೂಲಾರ್ಥದೊಳ್ ಜಲಧಿನೀರಕೆ ಸಾಮ್ಯಮಲ್ತೇಂ
    ಕೈಲಾಸಮಂ(=ಸ್ವನಿವಾಸ) ಶರಧಿಮಧ್ಯದೆ ಶಂಭು ಕಾಂಬಂ||

  2. Dubious godman Nithyananda’s so called ‘world’s greatest and purest Hindu nation,’ the ‘Republic of Kailaasa’ is reportedly in an island off Ecuador in the south Pacific ocean!

    ಆಲೋಕಿಸುತ್ತಮಿತದೂರದೆ ನಿತ್ಯನಿರ್ಪಾ
    ಕೈಲಾಸಮಂ ಶರಧಿಮಧ್ಯದೆ, ಶಂಭು ಕಾಂಬಂ|
    ಲೀಲಾಳಿಯಂ ನಿಜನಗೇಂದ್ರನೊಳಿಲ್ಲದೆಲ್ಲಂ
    ’ಭೋಲೇ’ನೃಪಂ ಗಡೆನುತೆಂಬರೆ, ತಕ್ಕುದೆಂದಂ||
    (ಭೋಲೇನೃಪ=ಭೋಲೇನಾಥ, ಭೋಲೇ=ಅಮಾಯಕ)

  3. ದತ್ತ್ವಾ ಪುಲಸ್ತ್ಯತನುಜಾಯ ನಿಜಾತ್ಮಲಿಂಗಂ
    ನೀತಃ ಸ ದಕ್ಷಿಣದಿಶಂ ಪುನರಾತ್ಮಜೇನ |
    ಸಂಸ್ಥಾಪಿತಃ ಸಪದಿ ಸಿಂಧುಸಮುದ್ರತೀರೇ
    ಸೈಶೋ ದದರ್ಶ ತುಹಿನಾಚಲಮಬ್ಧಿಮಧ್ಯೇ ||

    ರಾವಣನಿಗೆ ತನ್ನ ಆತ್ಮಲಿಂಗವನ್ನು ಕೊಟ್ಟು ದಕ್ಷಿಣದೇಶಕ್ಕೆ ಒಯ್ಯಲ್ಪಟ್ಟ ಈಶ್ವರನು ಮಗನಿಂದ ಸಿಂಧುಸಮುದ್ರತೀರದಲ್ಲಿ(ಗೋಕರ್ಣದಲ್ಲಿ) ಪ್ರತಿಷ್ಠಾಪಿತನಾಗಿ (ಅಲ್ಲಿಯೇ) ಸಮುದ್ರಮಧ್ಯದಲ್ಲಿ ಕೈಲಾಸವನ್ನು ಕಂಡನು.

  4. ಗೆಣಸು:

    मिष्टालुक! त्वत्सदृशः सगर्भः
    एकोsपि वा स्यात् वनिताकुलस्य ।
    धत्तेsनिवार्यस्थितिषु स्वसारम्
    यथा त्वमासीः जनकात्मजायाः ।।

    ಓ ಗೆಣಸೇ! ನಿನ್ನಂತಹ ಸಹೋದರನು ಸ್ತ್ರೀಕುಲಕ್ಕೆ ಒಬ್ಬನಾದರೂ ಇರಬೇಕು – ನೀನು ಹೇಗೆ ಜನಕಾತ್ಮಜೆಗಾದೆಯೋ ಹಾಗೆ ಅನಿವಾರ್ಯಸಂದರ್ಭಗಳಲ್ಲಿ ಸೋದರಿಗೆ ಸಹಾಯ ಮಾಡಬಲ್ಲಂತಹವನು. (ಸೀತೆ ಭೂಮಿಯೊಳಗೆ ಸಿಕ್ಕವಳು, ಗೆಣಸೂ ಹಾಗೆಯೇ – ಹಾಗಾಗಿ ಅವರಿಬ್ಬರಲ್ಲಿ ಸಹೋದರತ್ವ.)

  5. ನಾಮ ವಿಭೂತಿ ಸಂವಾದ
    “हरेः पर्यङ्काङ्कं परशिवपरास्त्वामभिमताः
    धरन्ते मां शूलाङ्कनमलिकमुद्रां हरिपराः ।”
    “बतैतत्सत्यं त्वद्भणितमि”ति भस्माभिवदति
    “म्रियन्तेsथाप्येते हरिहरनये भेदधिषणाः ।।”

    “ಹರಿಯ ಪರ್ಯಂಕ(ಆದಿಶೇಷ)ನ ಚಿಹ್ನೆಯಂತಿರುವ ನಿನ್ನನ್ನು ಪ್ರೀತಿಯಿಂದ ಶಿವಭಕ್ತರು ಧರಿಸುತ್ತಾರೆ. ಶೂಲಚಿಹ್ನದಂತಿರುವ ನನ್ನನ್ನು ಹರಿಪರರು ಲಲಾಟಮುದ್ರೆಯನ್ನಾಗಿ ಧರಿಸುತ್ತಾರೆ”.
    “ನಿಜ ನಿನ್ನ ಮಾತು” ಭಸ್ಮವು ಉತ್ತರಿಸುತ್ತದೆ – “ಆದರೂ ಈ ಜನ ಹರಿಹರರಲ್ಲಿ ಭೇದಬುದ್ಧಿಯಿಟ್ಟುಕೊಂಡು ಸಾಯುತ್ತಾರೆ.”

  6. ವಿಭೂತಿ : ಹಾಕಿಕೊಳುವುದದಗ್ನಿನೇತ್ರವು
    ತಾಕಿದೊಡನೆಯೆ ತಾನು ಹಣೆಯನು
    ನಾಮ : ನೂಕಿ ತೆಗೆದುದು ಕಾಮ ಶರಕದು ತಿಳಿಯದೇ ನನಗೇ ।
    ಸಾಕಿ ಸಲಹಿವೆ ಶಂಖ ಚಕ್ರವ
    ಬೇಕೆ ಸಾಕ್ಷಿಗಳಿನ್ನು ನಿನಗೇ ?
    ವಿಭೂತಿ : ತೂಕವಾವುದು ಗೊತ್ತು ತನಗದು ಗರ್ವವೆಂತದರೊಳ್ ।।

  7. शैवाग्रगण्यम् अगजावरजं दिदृक्षुः
    चक्रासि-शङ्ख-कमलानि करेषु बिभ्रन्
    वैकुण्ठम् एत्य भगवान् नगजा-कलत्रः
    ईशो ददर्श तुहिनाचलम् अब्धि-मध्ये ॥

    ಶೈವಾಗ್ರಗಣ್ಯನಾದ ಪರ್ವತರಾಜಪುತ್ರಿಯ ಅಣ್ಣನನ್ನು ಕಾಣಲು ಶಂಖ, ಚಕ್ರ, ಖಡ್ಗ ಮತ್ತು ಕಮಲಗಳನ್ನು ಹಿಡಿದು ಗಿರಿಜೆಯ ಪತಿಯು ವೈಕುಂಠಕ್ಕೆ ಹೋದಾಗ , ಸಮುದ್ರದ ಮಧ್ಯದಲ್ಲಿ ಹಿಮಾಚಲವನ್ನು ಕಂಡನು.

    (ಹಿನ್ನೆಲೆ: ನಾರಾಯಣನು ಶಿವಭಕ್ತ, ಶಿವನು ವಿಷ್ಣುಭಕ್ತ ಎಂದು ಸಂಪ್ರದಾಯದಲ್ಲಿ ಪ್ರಸಿದ್ಧವಾಗಿದೆ – ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ | ಶಿವಸ್ಯ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಂ ಶಿವಃ|| – ಇತ್ಯಾದಿ.

    ಹೀಗೆ ಭಕ್ತ್ಯಾಧಿಕ್ಯದಿಂದ ಶಿವನು ನಾರಾಯಣನ ರೂಪವನ್ನು ಧರಿಸಿ ಅವನನ್ನು ನೋಡಲು ಹೋದಾಗ ಶಿವಭಕ್ತನಾದ ನಾರಾಯಣನು ತುಹಿನಾಚಲವನ್ನೇ ಸಮುದ್ರದ ಮಧ್ಯದಲ್ಲಿ ನಿರ್ಮಿಸಿದ್ದ. ಹೀಗೆ ಶಿವಸಾರೂಪ್ಯವನ್ನು ಹೊಂದಿದ್ದ ಎಂದು ಅಧ್ಯಾಹಾರ ಮಾಡಿಕೊಳ್ಳಬೇಕು).

  8. यो रुद्ररुद्रनयनोत्तमदत्तभीतिः
    शीतोदधीशं अगमत् निजदेहमोहात्
    गत्वा अनुसृत्य सपदि श्वशुरस्य मार्गं
    ईशो ददर्श तुहिनाचलमब्धिमध्ये

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)