Oct 252021
 

ವರ್ಣನೆ – 
೧. ಅಹಲ್ಯೆ ಬಂದಾಗ ಗೌತಮನ ಯೋಚನೆ:

೨. ಇಷ್ಟದ ಮರ ಬೇರೆ ಬೇರೆ ಋತುಗಳಲ್ಲಿ

೩. ದೇವರಿಲ್ಲದ ಗುಡಿ


ಮಾಲಿನೀ ಛಂದಸ್ಸಿನ ಸಮಸ್ಯೆ:

ಕನ್ನಡ – ಪರಿದುಡುಗೆಯೆ ನಿತ್ಯಂ ರಾಣಿಗಂ ಚಂದಮಲ್ತೇ

ಸಂಸ್ಕೃತ – ವಿಲಸತಿ ನೃಪನಾರೀ ಛಿನ್ನವಸ್ತ್ರೇಣ ನಿತ್ಯಂ

  33 Responses to “ಪದ್ಯಪಾನ ೪೪೩”

  1. ದೇವರಿಲ್ಲದ ಗುಡಿಯು, ದ್ರವ್ಯಪೂಜೆಯದೆಂತು?
    ನಾವು-ನೀವಿಂತೆಂದು ತೊರೆವೆವದನು|
    ಸೇವೆಯನ್ನಾತ್ಮದಿಂ ಗೈವಾತನೆಲ್ಲೆಡೆಯು
    ತೀವಿಹ ನಿರಾಕಾರವನೆ ಕಾಂಬುವಂ||

  2. ಅಹಲ್ಯೆ ಬಂದಾಗ ಗೌತಮನ ಯೋಚನೆ:

    ಕಲ್ಲಾಗಿಸೇನೀಕೆಯನಾಂ ಗಡೆಂದಿಗೋ
    ಇಲ್ಲಿಂದಿಗಾರಿತ್ತನೊ ಜೀವಮಂ, ಮಿಗಿಲ್|
    ಸೊಲ್ಲಾದುದೇನಾತನದೆನ್ನ ಶಾಪಕಿಂ
    ಹೊಲ್ಲಾದುದೆನ್ನಂದಿನ ಭಾವಮೀಕೆಯೊಳ್|| (ಇಂದ್ರವಂಶ)

  3. ಸಮಸ್ಯಾಪೂರಣ:

    ಇರುವುವೆರಡೆ ವಸ್ತ್ರಂ ಮೈಯ ಮೇಲೊಂದು ಮತ್ತಂ
    ಹರಡಿ ಗಳುವೊಳಿರ್ಕುಂ ನಿರ್ಧನರ್ಗಂತೆ ನೋಡಲ್|
    ಪರಿದುಡುಗೆಯೆ ನಿತ್ಯಂ; ರಾಣಿಗಂ ಚಂದಮಲ್ತೇ
    ಪರಿದವೊಲಿರುವೆಂತೋ ವೇಷಭೂಷಂಗಳೆಂಬೆಂ||

  4. ಇಷ್ಟದ ಮರ ಬೇರೆ ಬೇರೆ ಋತುಗಳಲ್ಲಿ

    ಎಷ್ಟು ಯೋಚಿಸಿದರೂ ಬೋಧದಾರಿದ್ರ್ಯಗಳ-
    ನಿಷ್ಟವೇ ಕಾಡುತಿದೆ ಈ ವಿಷಯದೆ|
    ಇಷ್ಟನ್ನು ನಾ ಬಲ್ಲೆ ಕಲ್ಪತರುವೀವುದೆನು-
    ತಿಷ್ಟಪೇಯವನೆಲ್ಲ ಋತುಗಳೊಳ್ ತಾನ್||

  5. ದೇವರಿಲ್ಲದ ಗುಡಿಯ ಜೀವಕೇಂದ್ರವು ಜಡವು
    ನಾವಿಕನು ತೊರೆದಂತ ದೋಣಿಯಂತೆ|
    ಭಾವಭಕ್ತಿಗಳಿರದ ಉತ್ಸವಗಳೆಷ್ಟು ದಿನ
    ಕಾವನಿಲ್ಲದ ದಾವ ಕಾಡದಿರದೇ||

    • ಹೊಳ್ಳರು ದಾರಿತಪ್ಪಿ ಬಂದಂತಿದೆ! ಮರುನಲ್ಬರವು. ಪದ್ಯ ಚೆನ್ನಾಗಿದೆ. ಮತ್ತೆ ನೇಪಥ್ಯಕ್ಕೆ ಸರಿಯದಿರಿ.

      • ನಮಸ್ತೇ ಇನ್ನು ಸೇವೆ ತಪ್ಪಿಸುವುದಿಲ್ಲ

      • ಖಾರ’ಸೇವೆ’ಯದೇನು ಚೌಚೌ ಗಡೇನಯ್ಯ
        ಖೀರು-ಬೋಂಡಗಳನೇನಾರೆ ತಿನ್ನು|
        ವಾರವಾರಕೆ ಬಂದು ತಪ್ಪದೆಲೆ ನೀನಿಲ್ಲಿ
        ಗೀರಿಹೋಗೊಂದೆರಡು ಪದ್ಯಗಳನು||

  6. ಗುಡಿಯೇನು ಬಯಲೇನು ’ದೇವ’ರಿರದೆಡೆಯುಂಟೆ
    ಅಡಿಗಡಿಗರೂಪರೂಪದಿನಿರುವನು|
    ತೊಡಕೆಂತೊ ನಿನಗೆ ’ವಿಗ್ರಹ’ವಿಷಯದೊಳಗಕ್ಕು
    ಕಡೆಯುತಿಹರಲ್ತೆ ಶಿಲ್ಪಿಗಳತ್ತ ಕಾಣ್||

  7. ಅಹಲ್ಯೆ ಬಂದಾಗ ಗೌತಮನ ಯೋಚನೆ – ಪ್ರೊ|| ಅ. ರಾ. ಮಿತ್ರರ ಕಲ್ಪನೆಯನ್ನು ಆಧರಿಸಿ:

    ಮಾಲಿನ್ಯಮಯ ನೀನು ನಿಲ್ಲಲ್ಲೆ ಒಳಬರದೆ
    ಕಾಲೆತ್ತಿ ಹೊಯ್ದಿಹವೊ ಎನಿತು ನಾಯಿ|
    ಆಲೇಪ ಗೈದಂಟುವಾಳ-ಸೀಗೆಗಳ ಮೀಯ್
    ಕಾಲಾಂತರದೆ ಗಬ್ಬು ಕಳೆದೀತು ಕಾಣ್||

  8. ಶಾಪವಿಮೋಚಿತಳಾದ ಅಹಲ್ಯೆ ಬಂದಾಗ ಗೌತಮನ ಯೋಚನೆ

    ಕಾಂತೆಯ ಬರವಂ ಕಾಣಲ್
    ಭ್ರಾಂತಿಯೆ ಮತ್ತಡರಿಕೊಂಬುದೆಂದು ಪರಿಕಿಸಲ್|
    ಶ್ರಾಂತೆಯ ಕಳಂಕ ರಹಿತ ಸು-
    ಕಾಂತಿಗೆ ಬೆರಗಾದನಲ್ತೆ ಗೌತಮನಾಗಳ್||

  9. ಶೂನ್ಯವಾವೆಡೆಯೊಳಿದೆ ಲೋಕದೊಳ್, ದಿವ್ಯಚೈ-
    ತನ್ಯವಿರದೆಡೆ ಶಾಠ್ಯವೇ ಮೆರೆವುದೈ|
    ಅನ್ಯಾನ್ಯದುರ್ವೃತ್ತಿಯಿಲ್ಲಿಲ್ಲವೆಂದರಿಯೆ
    ಧನ್ಯ ನೀ ದೈವವನ್ನಲ್ಲೆ ಕಂಡೆ||

  10. ಪರಿದುಡುಗೆಯೆ ನಿತ್ಯಂ ರಾಣಿಗಂ ಚಂದಮಲ್ತೇ
    ===

    ಮೆರೆದಿರೆ ದಮಯಂತಿ ಪ್ರೀತನೊಳ್ ಪ್ರಾಂತದೊಳ್ ಮೇ
    ಣರಸಿಗೆ ವಿಧಿಚಿತ್ತಂ ಕಾಡಿರಲ್ ಕಾಡಿನೊಳ್ ತಾ
    ನರಸುತೆ ಪತಿಯಂ ಲೋಭಂಗಳಂ ಜೈಸಿರಲ್ ಹಾ!
    ಪರಿದುಡುಗೆಯೆ ನಿತ್ಯಂ ರಾಣಿಗಂ ಚಂದಮಲ್ತೇ

    ===
    ಕಾಡಿನಲ್ಲಿ, ಯಾವ ಲೋಭಕ್ಕೂ ತುತ್ತಾಗದೆ ಪತಿಯನ್ನರಸುತ್ತಿರುವ ದಮಯಂತಿಗೆ (ಕಾಡಿನೊಳ್) ಪರಿದುಡುಗೆಯೆ ನಿತ್ಯಂ ಚಂದಮಲ್ತೇ

  11. ಚಳಿಗಾಲಂ ಬಂದುದೀಗಳ್ ನಿರುಕಿಸೆಲವೊ ನೀಂ ಸಾಲುಸಾಲ್ ಮಾಮರಂಗಳ್
    ತೊಳಗುತ್ತುಂ ಪರ್ಣಗುಚ್ಛಂ ಸುಖಮನೆನಿತೊ ಕಣ್ಗಿತ್ತಿರಲ್ ತಾಮ್ರವರ್ಣಂ|
    ಬಿಳಿವೂಗಳ್ ಲಕ್ಷಲಕ್ಷಂ ಗಮಲು-ಬಿಳುಪದೇಂ ಬಿೞ್ದುಪೋಗುಂ ಗಡೆಂತೋ
    ತಳೆಗುಂ ತಾಂ ಪಣ್ಣನಲ್ಪಂ ಬಿಸಿಲ ಋತುವೊಳೈ ನೂರುಪೂವಿಂಗಮೊಂದಂ|| ಮಹಾಸ್ರಗ್ಧರಾ

    • Super.

    • ತುಂಬಾ ಹೆಚ್ಚು ಚಳಿ ಇದ್ದಾಗ ಛಳಿ ಅಂತ ಅರ್ಥವೋ 🙂 ? ಪದ್ಯ ಚೆನ್ನಾಗಿದೆ!

      • ತಮ್ಮ ಹೆಸರಿಗಿಂತ ಪ್ರಮಾಣವೆ? 🙂 ತಪ್ಪನ್ನು ತೋರಿಸಿಕೊಟ್ಟುದಕ್ಕಾಗಿ ಧನ್ಯವಾದ. ಮೂಲದಲ್ಲಿಯೇ ತಿದ್ದಿದ್ದೇನೆ.

  12. ವೃತನಿಷ್ಠಳಾದಳೌ ಚಳಿಗಾಲದಾದಿಯೊಳ್
    ನುತವಸಂತದಿ ಪೂವ ಸುರಿದುಕೊಂಬಳ್|
    ಸುತಫಲಂಗಳ ಹೊತ್ತು ಮಾಮರಳು ಮತ್ತೆ ತಾನ್
    ಋತುಸ್ನಾತೆಯಾಗಿಹಳು ಮಳೆಗಾಲದೊಳ್||

    • correction:

      ವ್ರತನಿಷ್ಠಳಾದಳೌ ಚಳಿಗಾಲದಾದಿಯೊಳ್
      ನುತವಸಂತದಿ ಪೂವ ಸುರಿದುಕೊಂಬಳ್
      ಸುತಫಲಂಗಳ ಹೊತ್ತು ಮಾಮರಳು ಮತ್ತಿದೋ
      ಋತುಸ್ನಾತೆಯೌ ಚೆಲುವೆ ಮಳೆಗಾಲದೊಳ್

  13. नृपतिवचनमद्द्धा पालयन् लीलया यो
    विपिनमगमदिन्द्रो रामचन्द्रः सदारः
    निजसुपतिसुकर्थं तद्वने त्यक्तसंम्पत्
    विलसति नृपनारी छिन्नवस्त्रेण नित्यं

    • ಶ್ರೀಕರರಿಗೆ ಪದ್ಯಪಾನಕ್ಕೆ ಸ್ವಾಗತ. ಪದ್ಯಭಾವ ಸ್ಪಷ್ಟವಿದೆ, ಚೆನ್ನಾಗಿದೆ. ’ಸುಕರ್ಥಂ’ ಎಂಬುದೊಂದು ಅರ್ಥವಾಗಲಿಲ್ಲ. ಬಿಡದೆ ಸತತವಾಗಿ ಇಲ್ಲಿ ತೊಡಗಿಕೊಳ್ಳಿ. ಧನ್ಯವಾದ.

      • ಬಹಳ ಧನ್ಯವಾದಗಳು..
        ಕ್ಷಮಿಸಬೇಕು ಅದು ‘ಸುಖಾರ್ಥಂ’

    • Very nice pUraNa.
      ಸುಪತಿ ಬದಲು ರಮಣ ಅಂತ ಮಾಡಬಹುದು.

  14. धर्मार्थं या ब्रह्मणा मे प्रदत्ता
    अर्थेऽनर्थे या स्थिता मत्-सहाया ।
    कामार्ता या देवराजं सिषेवे
    सैवेदानीम् मोक्षलक्ष्म्या चकास्ति ॥

    ಧರ್ಮಕ್ಕೋಸ್ಕರ ಬ್ರಹ್ಮನಿಂದ ನನಗೆ ಕೊಡಲ್ಪಟ್ಟವಳು, ಸಂಪತ್ತಿದ್ದಾಗಲೂ ಇಲ್ಲದಿದ್ದಾಗಲೂ ನನ್ನೊಡನೆ ಇದ್ದವಳು, ಕಾಮಾರ್ತಳಾಗಿದೇವರಾಜನನ್ನು ಸೇವಿಸಿದವಳು – ಅವಳೇ ಈಗ ಮೋಕ್ಷದ ಸಂಪತ್ತಿನಿಂದ ಹೊಳೆಯುತ್ತಿದ್ದಾಳೆ (ಶ್ರೀರಾಮನ ಪಾದಸ್ಪರ್ಶದಿಂದ ಅವಳಿಗೆ ಮುಕ್ತಿ ದೊರೆಯಿತು ಎಂದು ಭಾವ)

    • Realised that there is a sandhi between the first and the second pādas, causing the chandas to break.
      Therefore, modified it as below.
      या धर्मार्थं ब्रह्मणा मे प्रदत्ता
      यार्थेऽनर्थे च स्थिता मत्-सहाया ।
      या कामार्ता देव्राजं सिषेवे
      सैवेदानीम् मोक्षलक्ष्म्या चकास्ति ॥

  15. Realised that there is a sandhi between the first and the second pādas, causing the chandas to break.
    Therefore, modified it as below.
    या धर्मार्थं ब्रह्मणा मे प्रदत्ता
    यार्थेऽनर्थे च स्थिता मत्-सहाया ।
    या कामार्ता देव्राजं सिषेवे
    सैवेदानीम् मोक्षलक्ष्म्या चकास्ति ॥

  16. Samasya:

    परिजन-परिषेव्या दूरभाषा-निमग्ना
    चरणधृत-शलाका चित्रकेशावतंसा ।
    धृत-युतक-विशेषा शुद्ध-चर्मोरुकेयं
    विलसति नृपनारी छिन्न-वस्त्रेण नित्यम् ॥

    Served by her retinue, engrossed in her phone, wearing nails (pointed heels) on her feet, adorned with colourful hair (or colourful hair-ornament), wearing a beautiful shirt and trousers made of pure leather, this wife of a king (MLA /MP in modern context?) shines in torn clothes always.
    A king can be a political leader in the modern context.
    Ripped jeans are considered fashionable 🙂

    • The picture I had in mind was that of the young wife of a political leader doing her regular shopping in a mall. Not sure if that was conveyed!

    • Modern ರಾಣಿಗೆ ಸನಾತನ ಸಂಸ್ಕೃತದಲ್ಲಿ ನೀಡಿದ ಪರಿಹಾರ ಚೆನ್ನಾಗಿದೆ. 🙂

    • Very nice..
      ಬಹಳ ಚೆನ್ನಾಗಿದೆ ತಮ್ಮ ಪೂರಣ..

  17. ಧನ್ಯವಾದಗಳು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)