Jul 032020
 

1) ಅವಧಾನಿ ಗಣೇಶಭಟ್ಟ ಕೊಪ್ಪಲತೋಟರ ಪರಿಹಾರ:
ಖಂಡಿಸಿ ಸಿದ್ಧಾಂತಂಗಳ
ಮಂಡನೆಯಂ ಮಾಡದಿರ್ಪರಿವರಿಂತೀ ವೈ-|
ತಾಂಡಿಕವಾದಂಗೆಯ್ದಿರೆ
ಪಂಡಿತರುಂ ಸೋಲ್ತರಲ್ತೆ ಪಾಮರರಿದಿರೊಳ್||
(ಪಾಮರರಾದರೂ ಖಂಡನೆ ಮಂಡನೆಗಳನ್ನು ಸರಿಯಾಗಿ ಮಾಡದೇ ಬರಿದೇ ವಿತಂಡವಾದ ಮಾಡಿದ ಕಾರಣ ಪಂಡಿತರೂ ಅವರ ಎದುರು ಸೋತರು)

2) ಶ್ರೀ ಕೆ. ಬಿ. ಎಸ್. ರಾಮಚಂದ್ರರ ಪರಿಹಾರ:
ದಂಡದ ಮಾತಾಡುತಲೆ ವಿ-
ತಂಡವ ಮಾಳ್ದವನ ಕೂಡೆ ಸೋಗಂ ಬಿಡುತಿ-|
ನ್ನುಂಡಾಗಿರೆ ಸುಖನಿದ್ರೆಗೆ
ಪಂಡಿತರುಂ ಸೋಲ್ತರಲ್ತೆ ಪಾಮರನೆದುರೊಳ್||

3) ಶ್ರೀಧರ ಸಾಲಿಗ್ರಾಮರ ಪರಿಹಾರ:
ಭಂಡಂ ಪುಸಿಯುಲಿಯಿಂದಂ
ಕೊಂಡಾಡಲ್ ಮದ್ಯಪಾನಕಾಹ್ವಾನಿಸಿರಲ್|
ಮಂಡಿಸೆ ವಾದಂ ನಶೆಯೊಳ್
ಪಂಡಿತರುಂ ಸೋಲ್ತರಲ್ತೆ ಪಾಮರನಿದಿರೊಳ್||

4) ಶ್ರೀಮತಿ ಕಾಂಚನರವರ ಪರಿಹಾರ
ಗುಂಡಿಗೆಯೊಳ್ ತುಂಬಿರ್ಪುದು
ಬಂಡೆನುತುಂ ಸದ್ಗುಣಂಗಳಂ ತೋರುತೆ, ತಾಂ|
ಬಂಡೆರ್ದೆಯಾಣ್ಮರಾದೊಡೆ
ಪಂಡಿತರುಂ ಸೋಲ್ತರಲ್ತೆ ಪಾಮರನಿದಿರೊಳ್!!
ಪಾಮರರಲ್ಲೂ ಗುಣವನ್ನು ಗ್ರಹಿಸುತ್ತ, ತಾವು ಹೃದಯವಂತರಾಗಿರುವರಿವರು…..

5) ಶ್ರೀಮತಿ ಉಷಾರವರ ಪರಿಹಾರ-೧:
ಗಂಡಾಂತರಂ ಗಡಾ ಬ್ರ-
ಹ್ಮಾಂಡಜ್ಞಾನಮಿರದಾಗೆ ಪ್ರಾಣಾಪಾಯಂ|
ಖಂಡಿತಮಂತಾಸಮಯಂ
ಪಂಡಿತರುಂ ಸೋಲ್ತರಲ್ತೆ ಪಾಮರರಿದಿರೊಳ್ !!
ಬ್ರಹ್ಮಾಂಡಜ್ಞಾನ(ಲೋಕಜ್ಞಾನ)ವಿಲ್ಲದಿರೆ ಪ್ರಾಣಾಪಾಯ ಸಮಯದಲ್ಲಿ ಪಾಮರರಿಗೆ(ಅಶಿಕ್ಷಿತರಿಗೆ) ಸೋಲಬೇಕಾಗುವ ಪಂಡಿತರ ಕಲ್ಪನೆ (ಈಜಲು ಬಾರದ ಪಂಡಿತ ನಾವಿಕನಿಗೆ ಶರಣಾದ ಕಥೆಯ ಹಿನ್ನೆಲೆಯಲ್ಲಿ)

6) ಶ್ರೀಮತಿ ಉಷಾರವರ ಪರಿಹಾರ-೨:
ಕೆಂಡಾಮಂಡಲಗೊಂಡಂ
ಚಂಡಾಲನೊಡಂದು ಶಂಕರಂ, ಬಳಿಕಾತಂ|
ಪಿಂಡಾಂಡಮರ್ಮಮರಿಪಲ್
ಪಂಡಿತನುಂ ಸೋಲ್ತನಲ್ತೆ ಪಾಮರನಿದಿರೊಳ್||
“ಚಂಡಾಲ”ನಿಗಾಗಿ ಬರೆದ ಪದ್ಯ! ಏನಾದರು ತಪ್ಪಿದ್ದಲ್ಲಿ ಯಾರೂ ದಯವಿಟ್ಟು ಕೆಂಡಾಮಂಡಲರಾಗದಿರಿ

7) ಶ್ರೀಮತಿ ಉಷಾರವರ ಪರಿಹಾರ-೩:
ಮಂಡಲದಿ ಸುತ್ತುತೆ ಕೊರಳ
ಗೊಂಡೆಯಲುಗಿಸಿರ್ಕೆ ಗಾಣದೆತ್ತುಗಳುಂ ತಾಂ|
ಅಂಡಯಿಸಿರ್ದಂ ಕೃಷಿಕಂ
ಖಂಡಿತಮಾಗುತಿರಲಾಗೆ ಗಂಟಾನಾದಂ||
ಕಂಡೀ ಸೋಜಿಗಮಂ ಗಡ-
ಮಂಡಲೆದೋರ್ವ ಪ್ರಕಾಂಡ ಪಾರಂಗತನುಂ|
ಮಂಡಿಸಲನುಮಾನಂ “ಬರಿ
ರುಂಡಮಲುಗಿಸಿರಲುಮೆಂತು ಗಾಣಮೆಳೆಯದಲ್”?
ಗಂಡಾಳೆ, ನಿನ್ನಿನಿತು ಮತಿ
ಮಂಡೆಯಿರದವಕ್ಕೆನಲ್ಕೊಡಂತವಮಾನಂ-|
ಗೊಂಡು ನಿಪುಣತೆಗೆ ಮಣಿದುಂ
ಪಂಡಿತನುಂ ಸೋಲ್ತನಲ್ತೆ ಪಾಮರನಿದಿರೊಳ್||
(ಕಥೆ ಗೊತ್ತಿದ್ದವರಿಗೆ ಅರ್ಥವಾಗಬಹುದೇನೋ ?!!)

  One Response to “ಪಂಡಿತರುಂ ಸೋಲ್ತರಲ್ತೆ ಪಾಮರರಿದಿರೊಳ್||”

  1. ಉಂಡಾಡಿಯಪ್ಪ ಮಿಥ್ಯಾ-
    ಪಂಡಿತರುಂ ಸೋಲ್ತರಲ್ತೆ ಪಾಮರರಿದಿರೊಳ್|
    ಪುಂಡರ್, ನೀಚರ್, ದುಷ್ಟರ್
    ಭಂಡರ್ ಮಾತ್ರಮಿವರಜ್ಞರೇನಲ್ಲಂ ಕಾಣ್||

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)