Jul 032020
 

1) ಶ್ರೀಲಲಿತಾ ರೂಪನಗುಡಿಯವರ ಪರಿಹಾರ:
पितृवनतटे भर्त्रा साकं विहृत्य समागत-
प्रियकर-कराल्लब्धोन्मत्तं निपीय कपर्दिनः ।
परिचर-सती संभोज्यार्थं त्वघोर-समाहृतं
पिशितमशितं कृत्वा हृष्टा ललास मृगी मुदा ॥
ಉನ್ಮತ್ತ – ದತ್ತೂರ. ಶಿವನೊಡನೆ ಸ್ಮಶಾನದಲ್ಲಿ ವಿಹರಿಸುತ್ತಿದ್ದ ಅವನ ಪರಿಚರನಾದ ಜಿಂಕೆಯು ಮರಳಿ ಬರುವಾಗ ತನ್ನ ಪತ್ನಿಗೆ ಭಾಂಗವನ್ನೂ ಮಾಂಸವನ್ನೂ ತಂದು ಕೊಟ್ಟಿತು ಎಂದು ಆಶಯ. ಇದು ನನ್ನ ಪರಿಹಾರವಲ್ಲ – ನನ್ನ ಮಗಳದು. ಅದನ್ನೇ ಪರಿಷ್ಕರಿಸಿ versify ಮಾಡಿದ್ದೇನೆ. ಗಣೇಶ್ ಸರ್ ಅದನ್ನು ಮತ್ತೂ ಸ್ವಲ್ಪ ತಿದ್ದಿದ್ದಾರೆ.

2) ಗಣೇಶಭಟ್ಟ ಕೊಪ್ಪಲತೋಟರ ಪರಿಹಾರ-೧:
ಹರಿಕರಿಗಳೊಳ್ ವೈರಂ ದೂರಂಗೊಳಿಪ್ಪ ತಪೋವನಂ
ಮೆರೆಗುಮಿಳೆಯೊಳ್ ದೌಷ್ಟ್ಯಂಬೆತ್ತೀ ಸ್ಥಲಂ, ಬಿಯದಂ ಕುಡಲ್|
ಹರಿಣಿಯೊಲವಿಂ ತಿಂದತ್ತಾಗಳ್ ಜಲಕ್ಕನೆ ಮಾಂಸಮಂ
ಚಿರದೆ ಕಲಿವರ್ ಸರ್ವರ್ ತಾಮಾಶ್ರಯಂ ಪಡೆದರ್ಕಳಿಂ||
(ಸಿಂಹ- ಆನೆಗಳ ವೈರವನ್ನು ದೂರಗೊಳಿಸುವ ತಪೋವನವೂ, ದುಷ್ಟತೆಯನ್ನು ಪ್ರಸವಿಸಿದ ಈ ಸ್ಥಲವೂ ಭೂಮಿಯಲ್ಲಿದೆ. ಇಲ್ಲಿ ವ್ಯಾಧ/ಕಟುಕ ಕೊಟ್ಟಾಗ ಜಿಂಕೆ ಒಲವಿಂದ ಮಾಂಸವನ್ನು ತಿಂದಿತು. ತಮಗೆ ಆಶ್ರಯವನ್ನು ಕೊಟ್ಟವರಿಂದಲೇ ಎಲ್ಲರೂ ಕಲಿತುಕೊಳ್ಳುತ್ತಾರೆ)

3) ಗಣೇಶಭಟ್ಟ ಕೊಪ್ಪಲತೋಟರ ಪರಿಹಾರ-೨ (ಸುಧೀರ್ ಅವರು ಕೊಟ್ಟ ಒಂದು ಐಡಿಯಾದಂತೆ)
ತರಣಿ ತೆರಳಲ್ ಕಾಡೊಳ್ ಬೇಡರ್ ಸಮೀಕ್ಷಿಸಿ ಬೇಂಟೆಯೊಳ್
ದೊರೆತುದಡುತುಂ ಪಂಚಲ್ ಪೊಂದಲ್ ಮೊಲಂಗಳನೊಲ್ಲದೇ
ತರಳನಿಕರಂ ಪಕ್ವಂಗೊಂಡಿರ್ಪುದಂ ಸಲೆ ಪೊಂದುತುಂ
ಹರಿಣಿಯೊಲವಿಂ ತಿಂದತ್ತಾಗಳ್ ಜಲಕ್ಕನೆ ಮಾಂಸಮಂ||
(ಸೂರ್ಯಾಸ್ತ ಆಗಿದೆ. ಕಾಡಿನಲ್ಲಿ ಬೇಡರು ಬೇಟೆಯಲ್ಲಿ ದೊರೆತಿರುವುದನ್ನು ನೋಡಿ ಬೇಯಿಸಿ ಹಂಚುವಾಗ ತಮ್ಮ ಪಾಲಿಗೆ ಬಂದ ಮೊಲಗಳನ್ನು ಒಲ್ಲದೇ, “ತರಳನಿಕರಂ” ಹರಿಣಿಯ ಒಲವಿಂ ಪಕ್ವಂಗೊಂಡಿರ್ಪುದಂ ಸಲೆ ಪೊಂದುತುಂ ಜಲಕ್ಕನೆ ಮಾಂಸಮಂ ತಿಂದತ್ತು- ತರಳರ ಗುಂಪು, ಜಿಂಕೆಯ ಮಾಂಸದ ಮೇಲಿನ ಪ್ರೀತಿಯಿಂದ, ಬೇಯಿಸಿದ ಅದನ್ನು ತಿಂದಿತು)

4) ಕಾಂಚನಾರವರ ಪರಿಹಾರ-೧:
ಬೆರೆತು ಬೆಳೆಯಲ್ ವ್ಯಾಘ್ರವ್ರಾತಂಗಳೊಳ್ ಮಿಗಮೊಂದು ತಾಂ
ಕರುಣೆಯೊಡನೀ ಕ್ರೂರತ್ವಂ ಸಾಜದಿಂದೊಡಗೂಡಿರಲ್
ತೊರೆಯೆ ದಿಟದಿಂ ಸಸ್ಯಾಹಾರಂ, ಮೊಲಂ ಬಲಿಯಾಗಿರಲ್
ಹರಿಣಿಯೊಲವಿಂ ತಿಂದತ್ತಾಗಳ್ ಜಲಕ್ಕನೆ ಮಾಂಸಮಂ||
(ಹುಲಿಯ ಗುಂಪಿನಲ್ಲಿ ಬೆಳೆದ ಹರಿಣಿ…)

5) ಕಾಂಚನಾರವರ ಪರಿಹಾರ-೨:
ನರಿಯೊ ವೃಕಮೋ ಪೆರ್ಬಾವೋ! ತಾಂ ಸಸಾರದೆ ಸಿಲ್ಕಲಾ
ಚಿರತೆಯಮಮಾ ಸ್ವಾದಕ್ಕೆಂದುಂ ಮಿಗಂಗಳನಾಂತಿರಲ್,
ಸುರಿದ ತೆರದಿಂ ಬೆಂಗಾಡೊಳ್ವರ್ಷಮಂದೆದುರಾದೊಡಂ
ಹರಿಣಿಯೊಲವಿಂ ತಿಂದತ್ತಾಗಳ್ ಜಲಕ್ಕನೆ ಮಾಂಸಮಂ!
ಉಳಿದೆಲ್ಲ ಪ್ರಾಣಿಗಳು ಸುಲಭವಾಗೆ ಆ ಕಾಡಿನಲ್ಲಿ ದೊರೆಯುತ್ತಿರಲಾಗಿ, ತನ್ನ ಸ್ವಾದಕ್ಕೆಂದು ಮೃಗಗಳನ್ನವಲಂಬಿಸಿದ್ದ ಚಿರತೆಗೊಮ್ಮೆ ಬೆಂಗಾಡಿ ನಲ್ಲಿ ಮಳೆ ಸುರಿದಂತೆ ಹರಿಣಿಯು ಎದುರಾದಾಗ ಮಾಂಸವನ್ನು ತಂದಿತು.

6) ಸುಧೀರ ಕೇಸರಿಯವರ ಪರಿಹಾರ:
झटिति वमनं वारं वारं, सुभोज्यधिया पुनः|
पिशितमशितं, कृत्वा हृष्टा ललास मृगी मुदा॥

7) ಉಷಾರವರ ಪರಿಹಾರ:
ಹರಿಣಶಿರದಿರ್ಪಂತಾಶೃಂಗಂ ತರಾವರಿ ತುಂಡೆನಲ್
ಕರುಳಕುಡಿಯುಂ ಪೊಂದಲ್ಕೆಂದುಂ ವಿಚಿತ್ರದ ಕೊಂಬನೇ|
ಮರುಳಮದೊ ತಾಂ ಗರ್ಭಂ ಮೈವೆತ್ತುದಾ ಮಮತಾಮಯೀ
ಹರಿಣಿಯೊಲವಿಂ ತಿಂದತ್ತಾಗಳ್ ಜಲಕ್ಕನೆ ಮಾಂಸಮಂ!!
ಹರಿಣದ ಕೊಂಬು ಒಂದು ಬಗೆಯ ತುಂಡು ಎಂದು ತಿಳಿದು, ತನ್ನ ಮಗುವಿಗೆ ಕೊಂಬು ಬರಲೆಂದು ಮರುಳು ಹರಿಣಿ ತುಂಡು ~ ಮಾಂಸವನ್ನು ತಿಂದಿತು!!

  One Response to “ಹರಿಣಿಯೊಲವಿಂ ತಿಂದತ್ತಾಗಳ್ ಜಲಕ್ಕನೆ ಮಾಂಸಮಂ/ पिशितमशितं कृत्वा हृष्टा ललास मृगी मुदा”

  1. A beggar puts down his begging bowl full of nonveg food and slips to sleep from fatigue. Unknowingly a (young) female deer bites a morsel of it. Anxious, its father kicks away that bowl and checks her from eating more of it.
    ತಿರುಪೆಯವನೈತಂದಲ್ಲಿಟ್ಟುಂ ಸುಷುಪ್ತಿಗಮೈದಿರಲ್
    ನಿರುಕಿಸದೆಲೇನೆಂದಾ ಮಾಂಸಾನ್ನಭಾಗಮನಾಗಳೇ|
    ಹರಿಣಿಯೊಲವಿಂ ತಿಂದತ್ತಾಗಳ್, ಜಲಕ್ಕನೆ ಮಾಂಸಮಂ
    ಹರಿಣವಭಿಶಂಕಾಭಾಧ್ಯಂ(anxious) ನೀಂಟಿ ವಾರಿಸಿತಾಗಳೇ||

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)