Oct 052020
 

ವರ್ಣನೆಯ ವಸ್ತುಗಳು: ೧. ಹನುಮಂತನ ಬಾಲ ೨. ಪ್ರವಾಸದ ಆಯಾಸ ೩. ವಸಂತದ ವನಿತೆಯರು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಮುಂತಾದ ಛಂದಸ್ಸಿನ ಪಾದಾಂತ್ಯಕ್ಕೆ ಕೆಳಗಿನ ಸಾಲನ್ನು ಹೊಂದಿಸಿ ಪೂರ್ಣಮಾಡಿ: ನಿದ್ರಾಸಮುದ್ರಂ ಶಿವಂ

Sep 282020
 

ವರ್ಣನೆಯ ವಸ್ತುಗಳು: ೧. ಕಾಲು ಮುರಿದ ಮಂಚ ೨. ಕವಿಗಳಿಗೂ ಕಪಿಗಳಿಗೂ ಸಂವಾದ ೩. ಸುನಾಮಿ ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ: ಪಸುರಾಯ್ತಯ್ ಭರದಿಂದೆ ಕೆಂಪು ಕೇಳ್ ಗತಿ: ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು) ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು):

Sep 212020
 

ವರ್ಣನೆಯ ವಸ್ತುಗಳು: ೧. ಶ್ಮಶಾನದ ನೆಲ ೨. ಮಾರುಕಟ್ಟೆಗೆ ಬಂದ ಮಲ್ಲಿಗೆಯ ಹಾರ ೩. ಬಸುರಿಯ ಬಯಕೆ ಕಂದಪದ್ಯದ  ಸಮಸ್ಯೆ: ತುಟಿಗಂ ಮೆತ್ತಲ್ಕೆ ಖಾದ್ಯಮದೆ ಬಲಮೀಗುಂ  ಮಂಜುಭಾಷಿಣಿಯ ಸಂಸ್ಕೃತಸಮಸ್ಯೆ अधराहितान्नमचिरेण शक्तिकृत्

Aug 312020
 

ವರ್ಣನೆಯ ವಸ್ತುಗಳು: ೧. ಋಷ್ಯಾಶ್ರಮ ೨. ಕುರಿಯ ತಲೆ ೩. ಸುಳ್ಳಿನ ಸ್ವಗತ ಸಮಸ್ಯೆಯ ವಸ್ತು: ಪೊಳೆವುದೆಲ್ಲವು ಚಿನ್ನಮೇ (ಪಲ್ಲವ, ಭಾಮಿನೀಷಟ್ಪದಿ, ಪಂಚಮಾತ್ರಾ ಚೌಪದಿ ಮುಂತಾದ ಛಂದಸ್ಸಿನಲ್ಲಿ ಅಳವಡಿಸಿ ಪೂರ್ಣ ಮಾಡಿ)

Aug 102020
 
ಸೇತುವೆಯ ನಿರ್ಮಾಣದನಂತರ ನದಿಯು ತನ್ನ ಪಾತ್ರವನ್ನು ಬದಲಿಸಿತು

ಸಂಜೀವರ ಪದ್ಯ: ಅಳೆಯುವೇನೆನ್ನ ನೀನೀಯಳತೆಗೋಲಿನೊಳೆ? ಕಳೆ! ನಿನ್ನ ತಿಳಿವಾದರೋ ಪಳತು ಕಾಣಾ ತುಳಿದಿಳೆಯನಳೆದಿಹನು ಜಗವನಾಳುವವ ನಿ ನ್ನಳೆಯೇನು? ತಾಳು ತಾಳೆಂದೆಂದಿಗುಂ ——— ರಾಮಚಂದ್ರರ ಪದ್ಯ: ಮುದದೆ ಸದನವ ಕಟ್ಟೆ ಮಕ್ಕಳೆತ್ತಲೊ ಪೋಗ- ಲುದಕವಿಲ್ಲದ ಭವ್ಯ ಬಾವಿಯಂತೆ| ನದಿಗೆ ಸೇತುವೆ ಕಟ್ಟೆ ತಾನೆತ್ತೊ ಪರಿದಪುದು ಮದುವೆ ಪಳತಾಗಿರ್ದ ಕೂರ್ಮೆಯಂತೆ|| ——— ಸೋಮಶೇಖರರ ಪದ್ಯಗಳು: ಲಕ್ಷಾಂತರದ ಪಣದ ಜನ್ನದಿಂ ಜನಿಸಿತುಂ ದಕ್ಷೆತೆಯನೆಸಗಿ ನಿಂತಯ್, ಮನುಜರೋಳ್| ದೀಕ್ಷೆಯಿರ್ಪೊಡಮೀಕ್ಷೆ ಮಿತಿಯರಿವನರುಪಿ ನೀಂ ಸಾಕ್ಷಿಯಾದಪೆಯಲ್ತೆ ಚಿರಕಾಲಕಂ|| ಚಾಚಿರಲ್ ಬಾಹುವಿಂ ಪಿಡಿದೆಯೇನಿರ್ದಡಂ ತೋಚಿಕೆಯನನುಸರಿಸುತುಂ ಬಳೆದಯಯ್| ಔಚಿತ್ಯಮುಳಿದಿರ್ಪ […]

Aug 102020
 

ಶ್ರೀಧರ ಸಾಲಿಗ್ರಾಮರ ಪರಿಹಾರಗಳು: ಕಂದರಮಂ ಬಳಸುತ್ತುಂ ಮುಂದಕ್ಕಂ ನದಿಗಳೊಟ್ಟುಗೂಡುತೆ ಸಾಗಲ್| ಸಂದೆಗಮಿರದಾಗಿದೊ ಕಾ- ಣೊಂದಕೆ ಮತ್ತೊಂದ ಕೂಡಲೊಂದೆಯೆ ಮೊತ್ತಂ|| ಪೊಂದಿಸುತುಂ ದಿಟ್ಟಿಯನೊ- ಪ್ಪಂದಂಗೊಂಡೆರಡು ಕಂಗಳೀಕ್ಷಿಪುದೆಂದುಂ| ಮುಂದಿರ್ಪುದನೈಕ್ಯತೆಯಿಂ- ದೊಂದಕೆ ಮತ್ತೊಂದ ಕೂಡಲೊಂದೆಯೆ ಮೊತ್ತಂ|| ಸಂದಿರೆ ಗಾಯಕರ ಜುಗ- ಲ್ಬಂದಿಯೊಳರಿತೊರ್ವರೊರ್ವರೊಳ್ ಶ್ರುತಿ ಸೇರಲ್| ಸಂದೆಗಮಿರದೊಕ್ಕೊರಲಂ- ತೊಂದಕೆ ಮತ್ತೊಂದ ಕೂಡಲೊಂದೆಯೆ ಮೊತ್ತಂ|| ——– ನೀಲಕಂಠ ಕುಲಕರ್ಣಿಯವರ ಪರಿಹಾರ: ಕುಂದದ ಗಣಿತಂ ಬಹಳಾ- ನಂದಮನೀಯ್ಗುಂ ಬಹುತ್ವಮಂ ತೋರದೆಯೇ| ಗೊಂದಲಮೆನಿಸದು ಸಂಖ್ಯೆಯ- ನೊಂದಕೆ ಮತ್ತೊಂದು ಸೇರಲೊಂದೇ ಮೊತ್ತಂ|| (ಬಹುತ್ವವನ್ನು ತೋರದೇ ಒಂದು ಕೂಡಿಕೆಗೆ ಒಂದೇ […]

Aug 102020
 

चन्द्रचिन्ता – ವೀಣಾರವರ ಪದ್ಯ: नीराजयति भूमेर्मां कटाक्षैः यौवतं शतम्। न शकेsपि नु ताः स्प्रष्टुं श्वशुरः कुप्यति क्षणात्।। ——- ಚಂದ್ರನ ಚಿಂತೆ – ಉಷಾರವರ ಪದ್ಯ: ಹೆಂಗರುಳಂ ಭೂಲೋಕದ ತಂಗೆಂದಿರ ಸೋದರಂ ಸದಾ ಸಂತಂ ಬಾ-| ನಂಗಳದ ಸಂತೆಯೊಳ್ ಮೇಣ್ ತಿಂಗಳ ಸಂಬಳಿಗನೋಲ್ ಶ್ರಮಿಪ ಕರ್ಮಂ ಕಾಣ್||

Aug 032020
 

ಶಶಿಕಿರಣ್ ರವರ ಪದ್ಯ – ಹೂವಿನ ಬಗೆಗಿನ ಅನ್ಯೋಕ್ತಿ: मा कत्थिष्ठाः सुम व्यक्तं सौरभत्वात्कदाचन। विप्रकीर्णत्वमाप्नोषि वियोगाद्गुणसम्पदः॥ ಹೂವೇ, ನಿನ್ನಲ್ಲಿ ಸೌರಭವಿದೆಯೆಂದು ಬೀಗದಿರು, ಗುಣ(ದಾರ)ವಿಲ್ಲದಿದ್ದರೆ ನೀವು ಬಿಡಿಯಾಗಿಯೇ (ಬೆರೆಯದೆಲೆ) ಉಳಿಯುವೆ. ——- ಉಷಾರವರ ಪದ್ಯ – ಉಪ್ಪು & ಸಕ್ಕರೆಯ ಸಂವಾದ: ಒದಗಿರ್ಪುದೆನಗೂಟದೆಲೆಯ ಬಲತುದಿ ಭಾಗ್ಯ- ಮದೆ ನಿನ್ನನೆಡಕಿಡುದ ನಾನು ಬಲ್ಲೆಂ| ಮದಮೆಂತದೆಲೆಮರುಳೆಯೆನಗಿಲ್ಲ ಪರ್ಯಾಯ ಬದಲುಂಟು ನಿನಗೆ ಕಾಣ್ ಜೇನು ಬೆಲ್ಲಂ|| ಉಪ್ಪಿಗೆ ಆಲ್ಟರ್ನೇಟೇ ಇಲ್ಲ ಅಲ್ಲವೇ? ಹೇಗಿದೆ ಅದರ ಆಲ್ಟರ್ಕೇಟ್? ——- ವೀಣಾರವರ ಪದ್ಯ […]